HEALTH TIPS

ಸರ್ಕಾರಿ ಕಾಲೇಜಿನಲ್ಲಿ ದಸರಾ ನಾಡಹಬ್ಬ 5 ರಂದು

ಕಾಸರಗೋಡು: ಕಾಸರಗೋಡು ಕನ್ನಡ ಬಳಗ (ರಿ), ವಿದ್ಯಾನಗರ ಮತ್ತು  ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಸಂಯುಕ್ತಾಶ್ರಯದಲ್ಲಿ  ಅ. 5 ರಂದು ದಸರಾ ನಾಡಹಬ್ಬ ಕಾರ್ಯಕ್ರಮ ಜರಗಲಿದೆ. ಬೆಳಗ್ಗೆ 9.30 ರಿಂದ ಕಾಸರಗೋಡಿನ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾವಳಿಗಳು ನಡೆಯಲಿವೆ. 

ಮಧ್ಯಾಹ್ನ 12.30 ರಿಂದ ಸ್ನೇಹರಂಗದ ವಿದ್ಯಾರ್ಥಿಗಳಿಂದ ಭಾವಗೀತೆ, ಕವನ ವಾಚನ, ನೃತ್ಯ, ಭರತನಾಟ್ಯ, ನಾಟಕ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿವೆ. ಮಧ್ಯಾಹ್ನ 2.30ಕ್ಕೆ  ಸಭಾ ಕಾರ್ಯಕ್ರಮ ನಡೆಯಲಿದ್ದು ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ವಿ.ಎಸ್  ಉದ್ಘಾಟಿಸಲಿದ್ದಾರೆ.  ಸುಜಾತ ಎಸ್, ಅಧ್ಯಕ್ಷತೆ ವಹಿಸುವರು. ಹಿರಿಯ ಸಂಗೀತ ವಿದ್ವಾಂಸ ಕಲ್ಮಾಡಿ ಸದಾಶಿವ ಆಚಾರ್ಯ ಸಾಂಸ್ಕೃತಿಕ ಉಪನ್ಯಾಸ ನೀಡಲಿದ್ದಾರೆ. ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್ , ಡಾ. ಯು. ಶಂಕರನಾರಾಯಣ ಭಟ್ , ಪ್ರೊ. ವಿಮಲಾ ರಾಜಕುಮಾರಿ , ಪ್ರೊ.. ಪಿ.ಎನ್. ಮೂಡಿತ್ತಾಯ ಅವರಿಗೆ ಇದೇ ಸಂದರ್ಭದಲ್ಲಿ ಗೌರವಾರ್ಪಣೆ ನಡೆಯಲಿದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಜರಗಲಿದೆ.


ಅಂದು ಜಿಲ್ಲೆಯ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗಾಗಿ .ಕವಿತಾ ರಚನೆ  ಭಾಷಣ, ಭಾವಗೀತೆ,  ರಸಪ್ರಶ್ನೆ , ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಕಂಠಪಾಠ, ಕವಿತಾ ರಚನೆ ಸ್ಪರ್ಧೆಗಳು   ಜರಗಲಿವೆ. 

ಅ. 4ರ ಶುಕ್ರವಾರದಂದು ಮಧ್ಯಾಹ್ನ 1.30ಕ್ಕೆ ಕಾಸರಗೋಡಿನ ವಿವಿಧ ಕಾಲೇಜುಗಳ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಕವಿತಾ ರಚನೆ, ಕಥಾ ರಚನೆ, ಭಾವಗೀತೆ, ಭಾಷಣ ಸ್ಪರ್ಧೆಗಳು ನಡೆಯಲಿವೆ ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.

ನಿಯವಾವಳಿಗಳು: 1. ಪದವಿಪೂರ್ವ ವಿಭಾಗದ ಕಂಠಪಾಠಕ್ಕಾಗಿ ಯಾವುದಾದರೊಂದು ಷಟ್ಪದಿ ಕಾವ್ಯದ 7 ಪದ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

2. ಸ್ಪರ್ಧಾಳುಗಳ ಹೆಸರು. ತರಗತಿ ಮತ್ತು ಸ್ಪರ್ಧೆಯ ವಿವರಗಳನ್ನು ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಸಹಿತ ಸ್ಪರ್ಧೆ ನಡೆಯುವ ದಿನ ಕನ್ನಡ ವಿಭಾಗದ ಮುಖ್ಯಸ್ಕರಿಗೆ ತಲುಪಿಸಬೇಕು.

3- ಯಾವುದೇ ಸ್ಪರ್ಧೆಗೆ ಎಷ್ಟು ಮಂದಿ ವಿದ್ಯಾರ್ಥಿಗಳು ಬೇಕಾದರೂ ಭಾಗವಹಿಸಬಹುದು. ಆದರೆ ಒಬ್ಬ ವಿದ್ಯಾರ್ಥಿ ಒಂದಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries