ಚೆನ್ನೈ: ಕಾಟ್ಪಾಡಿ ಜಂಕ್ಷನ್ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
ಚೆನ್ನೈ: ಕಾಟ್ಪಾಡಿ ಜಂಕ್ಷನ್ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
ಈ ಘಟನೆಯು ಬೆಳಿಗ್ಗೆ 8.50ಕ್ಕೆ ವೆಲ್ಲೂರು ಜಿಲ್ಲೆಯ ತಿರುವಲಂ ನಿಲ್ದಾಣದಲ್ಲಿ ನಡೆದಿದೆ.
'ಪ್ರತ್ಯೇಕಗೊಂಡ ಎಂಜಿನ್ ಸುಮಾರು 500 ಮೀಟರ್ ಸಾಗಿತು. ಬೋಗಿ ಪ್ರತ್ಯೇಕಗೊಂಡಿದ್ದನ್ನು ಗಮನಿಸಿ ನಂತರ ನಿಲ್ಲಿಸಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಎಂಜಿನ್ - ಬೋಗಿ ಜೋಡಣಾ ಕೊಂಡಿ ಮುರಿದಿದ್ದೇ ಘಟನೆಗೆ ಕಾರಣ. ತನಿಖೆ ನಡೆಸಲಾಗುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಿಂದಾಗಿ ಈ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ರೈಲು ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಂಚರಿಸುವ ಬೃಂದಾವನ್ ಹಾಗೂ ಡಬ್ಬಲ್ ಡೆಕ್ಕರ್ ಎಕ್ಸ್ಪ್ರೆಸ್ಗಳೂ ವಿಳಂಬವಾಗಿ ಸಂಚರಿಸಿದವು.