HEALTH TIPS

ವಿಚಾರಣೆ ವೇಳೆ ದೂರುದಾರ ಅಭಿಪ್ರಾಯ ಬದಲಿಸಿದರೂ ಲಂಚ ಪ್ರಕರಣದಲ್ಲಿ ಆರ್.ಡಿ.ಒ. ಗೆ ದೋಷಿಯಾಗಿಸಿ ತೀರ್ಪು ನೀಡಿದ ವಿಜಿಲೆನ್ಸ್ ಕೋರ್ಟ್ .

ಕೊಚ್ಚಿ: ವಿಚಾರಣೆ ವೇಳೆ ದೂರುದಾರ ಅಭಿಪ್ರಾಯ ಬದಲಿಸಿ ಪಕ್ಷಾಂತರ ಮಾಡಿದರೂ ಲಂಚ ಪ್ರಕರಣದಲ್ಲಿ ಮಾಜಿ ಆರ್‍ಡಿಒ ದೋಷಿ ಎಂದು ವಿಜಿಲೆನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಮೂವಾಟ್ಟುಪುಳದ ಆರ್‍ಡಿಒ ಆಗಿದ್ದ ಕಾಂಜೀರಪಳ್ಳಿ ಮೂಲದ ವಿ.ಆರ್.ಮೋಹನನ್ ಪಿಳ್ಳೈ (63) ಅವರಿಗೆ ರಕ್ಷಣಾ ಗೋಡೆ ಪುನರ್ ನಿರ್ಮಿಸಲು 50 ಸಾವಿರ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ 7 ವರ್ಷ ಕಠಿಣ ಸಜೆ ಮತ್ತು 35 ಸಾವಿರ ದಂಡ ವಿಧಿಸಲಾಗಿದೆ. 2016 ರಲ್ಲಿ, ಮೋಹನನ್ ಪಿಳ್ಳೈ ಅವರು ವಝಕುಳಂನಲ್ಲಿ ಕುಸಿದಿರುವ ತಡೆಗೋಡೆ ನಿರ್ಮಿಸಲು ಅನುಮತಿ ನೀಡಲು ವೀಟ್ಟೂರ್ ವಾರಿಕ್ಲೈನಲ್ಲಿ ಮ್ಯಾಥ್ಯೂ ವಿ ಡೇನಿಯಲ್ ಅವರಿಂದ ಲಂಚ ಪಡೆದಿದ್ದರು. ವಿಜಿಲೆನ್ಸ್ ಆ ವೇಳೆ ಕೈಯಾರೆ ಸೆರೆಹಿಡಿದಿದ್ದರು.  ವಿಜಿಲೆನ್ಸ್ ಡಿಎಸ್ಪಿ ಎಂ. ಎನ್ ರಮೇಶ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೋಹನನ್ ಪಿಳ್ಳೈ ವಿರುದ್ಧದ ದೂರುದಾರರು ಬಳಿಕ ವಿಚಾರಣೆಯ ಸಮಯದಲ್ಲಿ ಅಭಿಪ್ರಾಯ ಬದಲಿಸಿದ್ದರು. 

ಮತ್ತೊಂದು ಲಂಚ ಪ್ರಕರಣದಲ್ಲಿ ಪಾಂಗೋಡ್ ಮಾಜಿ ಗ್ರಾಮಾಧಿಕಾರಿ ಸಜಿತ್ ಎಸ್ ನಾಯರ್ ಅವರಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪು ತಿರುವನಂತಪುರಂ ವಿಜಿಲೆನ್ಸ್ ಕೋರ್ಟ್ ನೀಡಿದೆ.  1500 ರೂ.ಗಳನ್ನು ಲಂಚ ಸ್ವೀಕರಿಸಿದ ಪ್ರಕರಣ ಇದಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries