HEALTH TIPS

ಮುಜುಂಗಾವಲ್ಲಿ ತುಲಾ ಸಂಕ್ರಮಣದ ತೀರ್ಥಸ್ನಾನ

ಕುಂಬಳೆ:ಇತಿಹಾಸ ಪ್ರಸಿದ್ದ ಮುಜುಂಗಾವು ಶ್ರೀ ಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ವಾರ್ಷಿಕ ಪವಿತ್ರ ಕೆರೆಯ ತೀರ್ಥಸ್ನಾನ ಗುರುವಾರ ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನೆರವೇರಿತು.


ಮುಂಜಾನೆ 4ರ ವೇಳೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಬೆಳ್ಳಿಯ ಕೊಡದಲ್ಲಿ ಪವಿತ್ರ ಕೆರೆಯಿಂದ ಜಲದೊಂದಿಗೆ ಆಗಮಿಸಿ ಶ್ರೀದೇವರಿಗೆ ಅಭಿಷೇಕ ಮಾಡುವ ಮೂಲಕ ತೀರ್ಥಸ್ನಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸ್ನಾನಗೈದು ಪುನೀತರಾದರು. ಮಾಯಿಪ್ಪಾಡಿ ಅರಸರಾದ ದಾನಮಾರ್ತಾಂಡವರ್ಮ ರಾಮಂತರಸು,ದೇವಾಲಯದ ಪ್ರಧಾನರಾದ ಎ.ಪಿ.ಜನಾರ್ದನ, ಅರ್ಚಕ ನಂದಕಿಶೋರ ತಂತ್ರಿ ಮೊದಲಾದವರು ನೇತೃತ್ವ ನೀಡಿದ್ದರು.


ವಿಶೇಷತೆ: 

*ವಾಡಿಕೆಗಿಂತ ಅತೀ ಹೆಚ್ಚಿನ ಸಂಖ್ಯೆಯ ಜನರು ತೀರ್ಥಸ್ನಾನಕ್ಕೆ ಆಗಮಿಸಿದ್ದರು.

*ಮಧ್ಯಾಹ್ನ 2 ರ ವೇಳೆಯ ಅಂಕಿಅಂಶದಂತೆ 50 ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರಿಂದ ದರ್ಶನ

*ಬೆಳಿಗ್ಗೆ 11 ರಿಂದ ಸಂಜೆವರೆಗೂ ಅನ್ನಪ್ರಸಾದ ವಿತರಣೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries