HEALTH TIPS

ಭಡ್ತಿ ಹೊಂದಿದ ಶಿಕ್ಷಕಿಗೆ ಬೀಳ್ಕೊಡುಗೆ

ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ಹದಿನೇಳು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಮುಖ್ಯಶಿಕ್ಷಕಿಯಾಗಿ ಬಡ್ತಿ ಹೊಂದಿದ ಪ್ರಸನ್ನ ಕುಮಾರಿ ಅವರನ್ನು ಶಾಲಾ ನೌಕರರ ಸಂಘದ ವತಿಯಿಂದ  ಶಾಲು ಹೊದಿಸಿ ಫಲ ಪುಷ್ಪಗಳನ್ನಿತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

1969ರಲ್ಲಿ ಅಡ್ಕಸ್ಥಳದಲ್ಲಿ ಜನಿಸಿ ಅಡ್ಯನಡ್ಕ ಹಾಗೂ ಕಾಟುಕುಕ್ಕೆ ಶಾಲೆಯಲ್ಲಿ ಶಿಕ್ಷಣವನ್ನು ಪೂರೈಸಿ, ಮಾಯಿಪ್ಪಾಡಿಯಲ್ಲಿ ಶಿಕ್ಷಕ ತರಬೇತಿಯನ್ನು ಮುಗಿಸಿ ಉಕ್ಕಿನಡ್ಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರ್ಪಡೆಯಾದ ಪ್ರಸನ್ನಕುಮಾರಿ ಟೀಚರ್ ಅವರು ಕುಂಬಳೆ ಹಾಗೂ ಸೂರಂಬೈಲು ಶಾಲೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಕಿರಣ್ ಕೆ, ಅಬೂಬಕ್ಕರ್, ಜ್ಯೋತಿ, ಮೋಹನ ನಾರಾಯಣ, ವಿನಯಕುಮಾರಿ, ಸಾವಿತ್ರಿ, ಶಾರದಾ, ಹೇಮಲತ, ಲಾರೆಟ್, ಮಂಗಳಗೌರಿ, ಗಾಯತ್ರಿ, ಸೌದತ್ ಕೆಪಿ, ಗೀತ ಕೆ, ರೆಜಿಮೋಳ್, ಮಾನಸ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸುನೀತ ಎ ಸ್ವಾಗತಿಸಿ, ರಾಧಾಕೃಷ್ಣ ಬಂಬ್ರಾಣ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries