HEALTH TIPS

ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

           ಚೆನ್ನೈ: 'ನನ್ನನ್ನು ಅವಮಾನಿಸುವ ನೆಪದಲ್ಲಿ ತಾವೇ ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುತ್ತಿರುವುದಕ್ಕೆ ಬಲಪಂಥೀಯ ಸಂಘಟನೆಯವರ ಕುರಿತು ನನಗೆ ಅನುಕಂಪ ಮೂಡತ್ತಿದೆ' ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಹೇಳಿದ್ದಾರೆ.

         ದೇವಾಲಯವೊಂದರ ಬಾಗಿಲ ಮೆಟ್ಟಿಲಿಗೆ ಉದಯನಿಧಿ ಭಾವಚಿತ್ರವನ್ನು ಹಾಕಿ, ಅದನ್ನು ತುಳಿದು ಹೋಗುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

          ಸನಾತನ ಧರ್ಮ ಕುರಿತು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯೆ ನಂತರ ಇದೇ ವಿಡಿಯೊವನ್ನು ಇನ್ನಷ್ಟು ಜನ ಹಂಚಿಕೊಂಡಿದ್ದಾರೆ.

               'ಸಂಘಿಗಳ ರಾಜಕೀಯ ಅಪ್ರಭುತ್ವತೆಯಿಂದ ಅವರೇ ಅವರ ಮಾನವನ್ನು ಹರಾಜು ಹಾಕಿಕೊಳ್ಳುತ್ತಿದ್ದಾರೆ. ಇವರ ಪರವಾಗಿ ನನ್ನ ಅನುಕಂಪವಿದೆ. ನಮ್ಮ ಸೈದ್ಧಾಂತಿಕ ವೈರಿಗಳು ನಮ್ಮ (ಡಿಎಂಕೆ) ಮೇಲೆ ಅಷ್ಟೊಂದು ಆಕ್ರೋಶಗೊಂಡಿದ್ದಾರೆ ಎಂದರೆ ನಾನು ದ್ರಾವಿಡ ತತ್ವದ ಸರಿಯಾದ ಮಾರ್ಗದಲ್ಲೇ ಸಾಗುತ್ತಿದ್ದೇನೆ ಎಂಬುದು ಖಾತ್ರಿಯಾಗುತ್ತಿದೆ' ಎಂದು ಉದಯನಿಧಿ ಹೇಳಿದ್ದಾರೆ.

'ಬಲ ಪಂಥೀಯರು ದ್ರಾವಿಡರ ನಾಯಕ ಇ.ವಿ.ಆರ್. ಪೆರಿಯಾರ್ ಅವರ ಮೇಲೆ ಚಪ್ಪಲಿ ಎಸೆದರು. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದರು. ಸಿ.ಎನ್. ಅಣ್ಣಾದುರೈ ಅವರ ಮೇಲೆ ದಾಳಿ ಮಾಡಿದರು. ಡಿ.ಎಂ. ಕರುಣಾನಿಧಿ ಹಾಗೂ ಎಂ.ಕೆ.ಸ್ಟಾಲಿನ್ ವಿರುದ್ಧವೂ ಅಪಪ್ರಚಾರ ಮಾಡಿದರು. ಆದರೆ ಅಸಮಾನತೆ ದೂರ ಮಾಡುವುದೇ ನಮ್ಮ ಗುರಿ. ನಮ್ಮ ಜಯವು ಧರ್ಮದ ಆಧಾರದಲ್ಲಿ ಸಮಾಜ ಒಡೆಯುತ್ತಿರುವವರ ಅಸಮರ್ಥತೆ. ಅವರು ನನ್ನ ಚಿತ್ರವನ್ನು ಕಾಲುಹಾಸನ್ನಾಗಿ ಮಾಡಿಕೊಳ್ಳಲಿ. ಅವರ ಕೊಳಕು ಮಿದುಳನ್ನೂ ತೊಳೆಯಲಾಗದು, ಕನಿಷ್ಠ ಪಕ್ಷ ಕಾಲಾದರೂ ಶುಚಿಯಾಗಲಿ. ಇದಕ್ಕೆ ನಮ್ಮ ಕಾರ್ಯಕರ್ತರು ಆಕ್ರೋಶಗೊಳ್ಳಬಾರದು' ಎಂದಿದ್ದಾರೆ.

               ಸನಾತನ ಧರ್ಮವನ್ನು ಉದಯನಿಧಿ ಅವರು ಡೆಂಗಿ, ಮಲೇರಿಯಾ ಹಾಗೂ ಕೊರೊನಾಗೆ ಹೋಲಿಸಿದ್ದರು. ಇದನ್ನು ಸಮಾಜದಿಂದ ನಿರ್ಮೂಲಗೊಳಿಸಬೇಕು ಎಂದಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಉದಯನಿಧಿ ಅವರ ಈ ಹೇಳಿಕೆಯನ್ನು ಕೆಲವರು ಬೆಂಬಲಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries