ಕಾಸರಗೋಡು: ಗಾಂಧಿ ಜಯಂತಿ ಅಂಗವಾಗಿ ಹೈಸ್ಕೂಲ್, ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ `ಗಾಂಧೀಜಿ ಖಾದಿ ಸ್ವಾತಂತ್ರ್ಯ ಹೋರಾಟ' ವಿಷಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಖಾದಿ ಗ್ರಾಮ ಕೈಗಾರಿಕಾ ಕಚೇರಿ ನಡೆಸಿದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಅಂಬಲತ್ತರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಅಭಿರಾಜ್ ಎಂ, ಪ್ರಸಾದ್ ಕೆ. ಪ್ರಥಮ ಬಹುಮಾನ ಪಡೆದರು. ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಶೀಹರಿ ಪಿ.ಕೆ. ಮತ್ತು ಶ್ರೀದೀಪ್ ಟಿ. ದ್ವಿತೀಯ ಸ್ಥಾನ ಪಡೆದರು. ಮಂಜೇಶ್ವರದ ಎಸ್.ಎ.ಟಿ.ಎಚ್.ಎಸ್.ನ ಕೆ.ಪಿ.ಪೂಜಾಲಕ್ಷ್ಮಿ ತೃತೀಯ ಬಹುಮಾನ ಪಡೆದರು. ಅ.29 ರಂದು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿಜೇರಿಗೆ ಬಹುಮಾನ ವಿತರಿಸಲಾಯಿತು.