ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಹಸಿರು ಕ್ರಿಯಾಸೇನೆ ಯೋಜನೆಯ ಎಂಸಿಎಫ್ ಕೇಂದ್ರದಲ್ಲಿ ಸ್ಥಾಪಿಸಿದ ಬೇಲಿಂಗ್ ಯಂತ್ರದ ಉದ್ಘಾಟನೆ ಜರಗಿತು.
ಪಂಚಾಯತಿ 2023-24ನೇ ವಾರ್ಷಿಕ ಯೋಜನೆಯಂತೆ ಪ್ಲಾಸ್ಟಿಕ್ ಮುಕ್ತ ಪಂಚಾಯತಿ ಧ್ಯೇಯದಂತೆ ಕಾರ್ಯಚರಿಸುವ ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರು ವಿವಿಧ ವಾರ್ಡ್ ಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಗಳನ್ನು ಪ್ರತ್ಯೇಕಿಸಿ ಈ ಯಂತ್ರದ ಮೂಲಕ ಬೇಲಿಂಗ್ ಮಾಡಿ ಕೊಂಡ್ಯೊಯ್ಯಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪಂ.ಆಡಳಿತ ಸಮಿತಿಯ ನೇತೃತ್ವದಲ್ಲಿ ಸುಮಾರು 5.75 ಲಕ್ಷ ರೂ ವ್ಯಯಿಸಿದ ಯಂತ್ರವನ್ನು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸ್ವಿಚ್ ಆನ್ ಮಾಡಿ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು.
ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ ಕುಲಾಲ್, ಸಹಾಯಕ ಕಾರ್ಯದರ್ಶಿ ಗಿರೀಶ್ ಸಿ, ವಿಇಒ ಡೇವಿ, ನವಾಸ್ ಮತ್ರ್ಯ, ಆಫೀದ್, ಹಸಿರು ಕ್ರಿಯಾಸೇನೆ ಸಮಿತಿಯ ಪದಾಧಿಕಾರಿಗಳಾದ ಉದಯ ಕುಮಾರಿ, ಭಾರತೀ ಬಲ್ತಕಲ್ಲು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು.