ಕೋಝಿಕ್ಕೋಡ್: ಸಾಹಿತಿ ಎಂಟಿ ವಾಸುದೇವನ್ ನಾಯರ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಇಬ್ಬರು ಪೋಲೀಸರ ವಶದಲ್ಲಿದ್ದಾರೆ. ಎಂಟಿ ಅವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಶಾಂತಾ ಮತ್ತು ಆಕೆಯ ದೂರದ ಸಂಬಂಧಿ ಪ್ರಕಾಶನ್ ಅವರನ್ನು ನಾಡಕಾವ್ ನ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಶಾಂತಾ ಐದು ವರ್ಷಗಳಿಂದ ಎಂಟಿ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಅವರು ಹಲವು ಬಾರಿ ಚಿನ್ನಾಭರಣಗಳನ್ನು ಕದಿದಿದ್ದರು ಮತ್ತು ಕದ್ದ ಚಿನ್ನವನ್ನು ಮಾರಾಟ ಮಾಡಲು ಪ್ರಕಾಶನ್ ಸಹಾಯ ಮಾಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಇಬ್ಬರನ್ನೂ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ
ಕಳೆದ ತಿಂಗಳ 22ರಿಂದ 30ರ ನಡುವೆ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆ ಸಮಯದಲ್ಲಿ ಎಂಟಿ ಮತ್ತು ಅವರ ಪತ್ನಿ ಮನೆಯಲ್ಲಿ ಇದ್ದಿರಲಿಲ್ಲ. ಕೋಝಿಕ್ಕೋಡ್ ನಡಕಾವ್ ಕೊಟ್ಟಾರಂ ರಸ್ತೆಯಲ್ಲಿರುವ ಸಿತಾರಾ ಎಂಬ ಹೆಸರಿನ ಮನೆಯಲ್ಲಿ ಕಳ್ಳತನ ನಡೆದಿದೆ. ಕಬೋರ್ಡ್ ನಲ್ಲಿಟ್ಟಿದ್ದ 26 ಪವನ್ ಚಿನ್ನ ಕಳೆದು ಹೋಗಿದೆ.