HEALTH TIPS

ಕಾಂಗ್ರೆಸ್‌ ತನ್ನ ಪ್ರೀತಿಯ ಅಂಗಡಿಯಲ್ಲಿ ದ್ವೇಷವನ್ನು ಮಾರುತ್ತಿದೆ: ಬಿಜೆಪಿ

          ವದೆಹಲಿ: ಬಿಜೆಪಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್‌ ನಖ್ವಿ ಕಾಂಗ್ರೆಸ್‌ ತನ್ನ ಪ್ರೀತಿಯ ಅಂಗಡಿಯಲ್ಲಿ ದ್ವೇಷವನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

         ಕಾಂಗ್ರೆಸ್‌ ಅನ್ನು 'ಅರ್ಬನ್‌ ನಕ್ಸಲ್‌' ಗ್ಯಾಂಗ್‌ ಆಳುತ್ತಿದೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ಶನಿವಾರ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಒಂದು 'ಭಯೋತ್ಪಾದಕರ ಪಕ್ಷ'ವಾಗಿದೆ.

         ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯ ನಡೆಸುತ್ತಿದೆ ಎಂದು ಹೇಳಿದ್ದರು.

             ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಖ್ವಿ, 'ಕಾಂಗ್ರೆಸ್‌ ತನ್ನ ಸೋಲಿನ ಖಿನ್ನತೆ ಮತ್ತು ದ್ವೇಷದ ಅಭ್ಯಾಸದಿಂದ ಹತಾಶೆಯ ಒತ್ತೆಯಾಳು ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ದ್ವೇಷ ಮತ್ತು ವಿರೋಧದಿಂದ ಹಳೆಯ ಪಕ್ಷಕ್ಕೆ ರಾಜಕೀಯ ವಿಪತ್ತು ಎದುರಾಗುತ್ತಿದೆ' ಎಂದು ನಖ್ವಿ ತಿಳಿಸಿದರು.

              ವಿರೋಧ ಪಕ್ಷವು ರಾಷ್ಟ್ರೀಯವಾದಿಗಳನ್ನು ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳನ್ನು ರಾಷ್ಟ್ರೀಯವಾದಿಗಳು ಎಂದು ಗುರುತು ಪಟ್ಟಿ ನೀಡುವ ಪ್ರಮಾಣ ಪತ್ರಗಳ ಬಹುರಾಷ್ಟ್ರೀಯ ವಿತರಣಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅವರು ಟೀಕಿಸಿದರು.

             'ತಮ್ಮ ಪಕ್ಷಕ್ಕೆ ಇರುವ ರಾಜಕೀಯ ಅಪಾಯವನ್ನು ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್‌ನ ದುರಹಂಕಾರವನ್ನು ಪ್ರದರ್ಶಿಸುತ್ತಿದೆಯೇ ಹೊರತು ಅದರ ಬುದ್ಧಿವಂತಿಕೆಯನಲ್ಲ. ಕಾಂಗ್ರೆಸ್‌ ತನ್ನ ಪ್ರೀತಿಯ ಅಂಗಡಿಯಲ್ಲಿ ದ್ವೇಷವನ್ನು ಮಾರುತ್ತಿದೆ' ಎಂದು ನಖ್ವಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries