HEALTH TIPS

ನವೀನ್ ಬಾಬು ಸಾವು; ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕಣ್ಣೂರು ಜಿಲ್ಲಾಧಿಕಾರಿ ಗೈರು

ಕಣ್ಣೂರು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಎಡಿಎಂ ನವೀನ್ ಬಾಬು ಸಾವಿನ ಪ್ರಕರಣದ ಆರೋಪಿ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರು ಭಾಗವಹಿಸದೆ ದೂರ ಉಳಿದಿದ್ದಾರೆ.

ಪಿಣರಾಯಿಯಲ್ಲಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಗೈರಾದರು. ವಿವಾದಗಳ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿದುಬಂದಿದೆ. ಇದು ದಿವ್ಯಾ ಕೂಡ ಭಾಗವಹಿಸಬೇಕಿದ್ದ ಕಾರ್ಯಕ್ರಮವಾಗಿತ್ತು.

ಊರಿಗೆ ವರ್ಗಾವಣೆಗೊಂಡ ನವೀನ್ ಬಾಬು ಅವರಿಗೆ ತಮ್ಮ ಸಹೋದ್ಯೋಗಿಗಳು ನೀಡಿದ ಬೀಳ್ಕೊಡುಗೆ  ಕಾರ್ಯಕ್ರಮಕ್ಕೆ ಪಿಪಿ ದಿವ್ಯಾ ಆಹ್ವಾನವಿಲ್ಲದೆ ಆಗಮಿಸಿ ಭ್ರಷ್ಟಾಚಾರದ ಆರೋಪಗಳನ್ನು ಎತ್ತಿದರು. ಇದರಿಂದ ಮಾನಸಿಕವಾಗಿ ಕುಗ್ಗಿದ ಪ್ರಾಮಾಣಿಕ ಎಡಿಎಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರ ಸಮ್ಮುಖದಲ್ಲಿ ಜಿ.ಪಿ.ದಿವ್ಯಾ ಅವರು ಆರೋಪ ಮಾಡಿ ಅವಮಾನ ಮಾಡಿದರೂ ಕಲೆಕ್ಟರ್ ಒಂದು ಮಾತನ್ನೂ ಆಡಲಿಲ್ಲ. ಜಿಲ್ಲಾಧಿಕಾರಿಗೆ ಎಡಿಎಂ ಅವರೊಂದಿಗಿನ ಮನಸ್ತಾಪಕ್ಕೆ ಷಡ್ಯಂತ್ರದ ಭಾಗವಾಗಿಯೇ ಪಿ.ಪಿ.ದಿವ್ಯಾ ಬಂದು ಆರೋಪ ಮಾಡಿದ್ದಾರೆ ಎಂಬ ಆರೋಪವೂ ಇದೆ.

ಆದರೆ ದಿವ್ಯಾ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಕಲೆಕ್ಟರ್ ಅವರ ಆಹ್ವಾನದಂತೆ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಆದರೆ ಕಲೆಕ್ಟರ್ ಈ ವಾದವನ್ನು ಅಲ್ಲಗಳೆದಿದ್ದ್ತಾರೆ.

ಭೂಕಂದಾಯ ಜಂಟಿ ಆಯುಕ್ತರ ವರದಿ ಬಂದ ನಂತರ ನವೀನ್ ಬಾಬು ಸಾವಿನ ಕುರಿತು ಅರುಣ್ ಕೆ.ವಿಜಯನ್ ಅವರನ್ನು ವರ್ಗಾವಣೆ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ರಜೆ ಮೇಲೆ ತೆರಳುವ ಇಚ್ಛೆಯನ್ನು ಜಿಲ್ಲಾಧಿಕಾರಿ ಸರ್ಕಾರಕ್ಕೆ ಅನಧಿಕೃತವಾಗಿ ತಿಳಿಸಿದ್ದಾರೆ. ಭೂ ಕಂದಾಯ ಜಂಟಿ ಆಯುಕ್ತರು ಎಡಿಎಂ ಸಾವಿನ ಕುರಿತು ಕಂದಾಯ ಇಲಾಖೆಗೆ ವರದಿ ಸಲ್ಲಿಸಬಹುದು. ಇದೇ ವೇಳೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯಲ್ಲಿ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಭೇಟಿಯಾಗಿರುವರೆಂದು ತಿಳಿದುಬಂದಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries