HEALTH TIPS

ಮಾಧ್ಯಮಗಳು ಧ್ವನಿ ಇಲ್ಲದವರ ಧ್ವನಿಯಾಗಬೇಕು: ನ್ಯಾಯಮೂರ್ತಿ ದೇವನ್ ರಾಮಚಂದ್ರನ್

ಕೊಚ್ಚಿ: ಮಾಧ್ಯಮಗಳು ಧ್ವನಿ ಇಲ್ಲದವರ ಧ್ವನಿಯಾಗಬೇಕು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ತಿಳಿಸಿದ್ದಾರೆ. ಸಮಾಜದಲ್ಲಿ ಎಷ್ಟು ದನಿಗಳು ಮೂಡುತ್ತಿವೆ, ಎಷ್ಟು ದನಿ ಎತ್ತಲು ಅವಕಾಶ ನೀಡಲಾಗುತ್ತಿದೆ ಎಂದು ಯೋಚಿಸುವ ಸಮಯ ಬಂದಿದೆ. ಪತ್ರಕರ್ತರು ಎಲ್ಲರ ಧ್ವನಿಯಾಗುವಂತಾಗಬೇಕು ಎಂದರು.

ಕೇರಳ ಪತ್ರಕರ್ತರ ಒಕ್ಕೂಟದ (ಕೆಡಬ್ಲ್ಯುಜೆ) 60ನೇ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಗಾಂಧಿ ಸ್ಕ್ವೇರ್‍ನಲ್ಲಿ ಆಯೋಜಿಸಿದ್ದ ಘೋಷಣೆ ಸಂಜೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳು ಸತ್ಯದ ಜೊತೆ ನಿಲ್ಲುವಂತಾಗಬೇಕು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದರು. ರಾಜ್ಯ ಸಮ್ಮೇಳನದ ಅಂಗವಾಗಿ ಗಾಂಧಿ ಪ್ರತಿಮೆ ಎದುರು 60 ಮಣ್ಣಿನ ಹಣತೆಗಳನ್ನು  ಬೆಳಗಿಸಲಾಯಿತು.

ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮೊದಲ ದೀಪ ಬೆಳಗಿಸಿದರು. ಪೋಲೀಸ್ ಆಯುಕ್ತ ಕೆ.ಎಸ್. ಸುದರ್ಶನ್, ಬಿಜೆಪಿ ಮುಖಂಡ ಸಿ.ಜಿ. ರಾಜಗೋಪಾಲ್, ಡಿಸಿಸಿ ಅಧ್ಯಕ್ಷ ಮಹಮ್ಮದ್ ಶಿಯಾಸ್, ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಟಿ.ಸಿ. ಸಂಜಿತ್, ಸಿಐಸಿಸಿ ಜಯಚಂದ್ರನ್, ಚಂದ್ರಹಾಸನ್ ವಡುತಲ, ಎರ್ನಾಕುಳಂ ಪ್ರೆಸ್ ಕ್ಲಬ್ ಉಪಾಧ್ಯಕ್ಷ ಎನ್.ಕೆ. ಸ್ಮಿತಾ, ಜೊತೆ. ಕಾರ್ಯದರ್ಶಿ ಶಬ್ನಾ ಜಿಯಾದ್, ಕಾರ್ಯದರ್ಶಿ ಎಂ. ಶಜಿಲ್ ಕುಮಾರ್, ಕಾರ್ಯಕ್ರಮ ಸಮಿತಿ ಸಂಚಾಲಕ ಜಲೀಲ್ ಅರುಕುಟ್ಟಿ ಮೊದಲಾದವರು ದೀಪ ಬೆಳಗಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಗೋಪಕುಮಾರ್ ಅಧ್ಯಕ್ಷತೆ ವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries