HEALTH TIPS

ರೈಲು ಅವಘಡ: ಸಹಾಯಕ್ಕಾಗಿ ಅಂಗಲಾಚುತ್ತಿದ್ದರು

          ಚೆನ್ನೈ: ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಕವರೈಪಟ್ಟೈ ರೈಲು ನಿಲ್ದಾಣದ ಸಮೀಪ ಭಾರಿ ಶಬ್ದ ಕೇಳಿಸಿತು. ಕೂಡಲೇ ಅತ್ತ ಓಡಿದೆವು. ಹಳಿ ತಪ್ಪಿ ಬಿದ್ದ ಬೋಗಿಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಲು ಮುಂದಾದೆವು ಎಂದು ಸ್ಥಳೀಯರೊಬ್ಬರು ವಿವರಿಸಿದರು.

         ಕೂಡಲೆ ಪೊಲೀಸ್‌ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು ಎಂದು ತಿಳಿಸಿದರು.

ರೈಲು ನಿಲ್ದಾಣದಿಂದ 100 ಮೀಟರ್‌ ದೂರದಲ್ಲಿ ವಾಸಿಸುತ್ತಿರುವ ಬಾಲಕೃಷ್ಣನ್‌ ಎಂಬುವರು, 'ರೈಲು ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿತು. ಅವುಗಳಲ್ಲಿ ಸಿಲುಕಿದ ಪ್ರಯಾಣಿಕರ ರಕ್ಷಣೆಗೆ ಶಕ್ತಿ ಮೀರಿ ಪ್ರಯತ್ನಿಸಿದೆವು. ಸಹಾಯಕ್ಕಾಗಿ ಜನರು ಅಂಗಲಾಚುತ್ತಿದ್ದರು' ಎಂದು ಹೇಳಿದರು.

             'ಅವಘಡ ನಡೆದ ಸ್ಥಳಕ್ಕೆ ಹೋಗುತ್ತಿರುವಾಗಲೇ ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತು. ಬೋಗಿಗಳಡಿ ಹಲವರು ಪ್ರಯಾಣಿಕರು ಇರುವುದು ತಿಳಿಯಿತು. ಅವರಿಗೆ ಸಹಾಯ ಮಾಡಿದೆವು. ಕೆಲವರಿಗೆ ಕೈಗಳಿಗೆ, ಮತ್ತೆ ಕೆಲವರಿಗೆ ಕಾಲುಗಳಿಗೆ ಗಾಯವಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿದೆವು ಎಂದು ಮತ್ತೊಬ್ಬ ನಿವಾಸಿ ವೇತ್ರಿ ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries