ವಯನಾಡ್: ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ನವ್ಯಾ ಹರಿದಾಸ್ ಪ್ರಚಾರ ಕಾರ್ಯಗಳಿಗೆ ತೊಡಗಿಸಿಕೊಂಡಿದ್ದಾರೆ.
ಲಕ್ಕಡಿಯಲ್ಲಿರುವ ಕರಿಂತಂಡನ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಕಲ್ಪೆಟ್ಟಾ ಹೊಸ ಬಸ್ ನಿಲ್ದಾಣದಿಂದ ನವ್ಯಾ ಹರಿದಾಸ್ ಅವರ ರೋಡ್ ಶೋ ಆರಂಭವಾಯಿತು.
ಜನಸಾಮಾನ್ಯರ ನಡುವೆ ಕೆಲಸ ಮಾಡಿದ ತಮ್ಮ ನಾಯಕನನ್ನು ಭೇಟಿ ಮಾಡಲು ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಜನರು ಜಮಾಯಿಸಿದ್ದರು. ತೆರೆದ ಜೀಪಿನಲ್ಲಿ ಆಗಮಿಸಿದ ನವ್ಯಾ ಹರಿದಾಸ್ ಅವರನ್ನು ಕಾರ್ಯಕರ್ತರು ಹೂವಿನ ಹಾರ ಹಾಕಿ, ಹೂಗುಚ್ಛ ನೀಡಿ ಅದ್ಧೂರಿ ಸ್ವಾಗತ ಕೋರಿದರು.
ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಭರವಸೆ ಇದೆ ಎಂದು ನವ್ಯಾ ಹರಿದಾಸ್ ಹೇಳಿದ್ದಾರೆ. ಜನರಿಂದ ಉತ್ತಮ ಸ್ವಾಗತ ಸಿಗುತ್ತಿದ್ದು, ಅವರ ಉತ್ಸಾಹ ಮತ್ತು ಶಕ್ತಿ ನನಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ನವ್ಯಾ ಹೇಳಿದ್ದಾರೆ.
ವಯನಾಡಿನಲ್ಲಿ ಉಪಚುನಾವಣೆಗೆ ರಾಹುಲ್ ಮತ್ತು ಅವರ ಕುಟುಂಬವೇ ಕಾರಣ. ರಾಹುಲ್ ಜನರಿಗೆ ಮೋಸ ಮಾಡಿದ್ದಾರೆ. ಅವರ ಕುಟುಂಬದಿಂದ ಮತ್ತೊಬ್ಬರು ಬಂದರೆ ಅಭಿವೃದ್ದಿಗೆ ಹಿನ್ನಡೆಯಾಗಲಿದೆ ಎಂಬ ಆತಂಕ ಜನರಲ್ಲಿದೆ ಎಂದು ನವ್ಯಾ ಹೇಳಿದ್ದಾರೆ.
ನ.13ರಂದು ಕೇರಳದಲ್ಲಿ ಉಪಚುನಾವಣೆ ನಡೆಯಲಿದೆ. ವಯನಾಡ್ ಅಲ್ಲದೆ ಪಾಲಕ್ಕಾಡ್ ಚೇಲಕ್ಕರ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ. 23ರಂದು ಮತ ಎಣಿಕೆ ನಡೆಯಲಿದೆ.