HEALTH TIPS

ಪದ್ಮಪ್ರಶಸ್ತಿ ಪುರಸ್ಕೃತೆ, ಮಧ್ಯಪ್ರದೇಶದ ಬುಡಕಟ್ಟು ಹೋರಾಟಗಾರ್ತಿ ಬಿಜೆಪಿಗೆ

 ಭೋಪಾಲ್‌: ಪದ್ಮಪ್ರಶಸ್ತಿ ಪುರಸ್ಕೃತೆ, ಬುಡಕಟ್ಟು ಹೋರಾಟಗಾರ್ತಿ ದುರ್ಗಾ ಬಾಯಿ ವ್ಯಾಮ್‌ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಪ್ರೇರಣೆಗೊಂಡು ಅವರು ಕೇಸರಿ ಪಕ್ಷ ಸೇರಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

ಯಾದವ್‌ ಅವರು ದುರ್ಗಾ ಅವರ ಮನೆಗೆ ತೆರಳಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಬಳಿಕ ಮಾತನಾಡಿದ ಸಿಎಂ, 2022ರ ಪದ್ಮಪ್ರಶಸ್ತಿ ಪುರಸ್ಕೃತೆ ತಮ್ಮನ್ನು ಭೇಟಿಯಾಗಲು ಬಯಸಿದ್ದರು ಎಂದಿದ್ದಾರೆ.

ರಾಣಿ ದುರ್ಗಾವತಿ ಅವರ ವೈಭವವನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಹಾಗೂ ತಮ್ಮ ಸಮುದಾಯದ ಬೆನ್ನಿಗೆ ನಿಂತಿದೆ ಎಂಬುದನ್ನು ಅರಿತು ಗೊಂಡಾ ಸಮುದಾಯದ ಪ್ರಮುಖ ಹೋರಾಟಗಾರ್ತಿ ದುರ್ಗಾ ಅವರು ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

6ನೇ ಶತಮಾನದಲ್ಲಿ ಮೊಘಲರ ವಿರುದ್ಧ ಹೋರಾಡಿದ್ದ ರಾಣಿ ದುರ್ಗಾವತಿ, ಗೊಂಡಾ ಸಾಮ್ರಾಜ್ಯದ ದಂತಕತೆ ಎನಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries