HEALTH TIPS

ನನ್ನನ್ನು ಒಮ್ಮೆ ವಿಚಾರಿಸಿ, ಪ್ಲೀಸ್: ಎರಡು ವಾರಗಳ ನಂತರ ಬನ್ನಿ!

ಕೊಟ್ಟಾಯಂ: ಏನಾಗಿತ್ತು? ನಟ ಸಿದ್ದಿಕ್ ವಿರುದ್ಧ ದೇಶಾದ್ಯಂತ ಲುಕ್‍ಔಟ್ ನೋಟಿಸ್ ಜಾರಿಯಾಗುತ್ತಿದೆ, ಉನ್ನತ ಪೋಲೀಸ್ ಅಧಿಕಾರಿಗಳು ಅಡಗುತಾಣಗಳನ್ನು ಶೋಧಿಸಿ ಕೈಕೋಳದೊಂದಿಗೆ ಕಾಯುತ್ತಿದ್ದಾರೆ. ಅವರ ಪುತ್ರನ ಸ್ನೇಹಿತರನ್ನೆಲ್ಲ ವಶಕ್ಕೆ ಪಡೆಯುತ್ತಿದ್ದಾರೆ ಇತ್ಯಾದಿ... ಸಿದ್ದಿಕ್ ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಸರ್ಕಾರಿ ವಕೀಲರಲ್ಲದೆ, ದೊಡ್ಡ ವಕೀಲರನ್ನು ಸಹ ನಿಯೋಜಿಸಲಾಯಿತು ಮತ್ತು ಅವರಿಗೆ ಪ್ರಕರಣವನ್ನು ಕಲಿಸಲು ಅನೇಕ ಐಪಿಎಸ್ ಅಧಿಕಾರಿಗಳನ್ನು ನೇಮಿಸಲಾಯಿತು.

ಕೇರಳ ಪೋಲೀಸರು ಸಿದ್ದಿಕ್ ನನ್ನು ವಶಕ್ಕೆ ಪಡೆದು ಜೈಲಿಗೆ ಹಾಕಬೇಕು ಎಂದು ಪಟ್ಟು ಹಿಡಿದಿದ್ದಾರೆ.  ಈ ಎಲ್ಲ ಗಲಾಟೆಗಳಿಗೆ ಖರ್ಚು ಮಾಡಿದ ಹಣವೆಷ್ಟು? ಯಾರದ್ದು?

ಕೊನೆಗೂ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತು. ಸಿದ್ದಿಕ್ ತನ್ನ ಅಡಗುತಾಣ ಜೀವನ ಮುಗಿಸಿ ಹೊರಬಂದರು. ಅದರೊಂದಿಗೆ ಕೇರಳ ಪೋಲೀಸರ ಉತ್ಸಾಹವೆಲ್ಲ ಇಳಿದುಹೋಯಿತು.  ಸದ್ಯದ ಪರಿಸ್ಥಿತಿ ಏನೆಂದರೆ ಸಿದ್ದಿಕ್ ವಿಚಾರಣೆಗೆ ಕೋರ್ಟ್ ಅನುಮತಿ ನೀಡಿದರೂ ಪೋಲೀಸರು ತಲೆ ಹಾಕುವಂತಿಲ್ಲ. ನನ್ನನ್ನು ಪ್ರಶ್ನಿಸಿ, ಪ್ರಶ್ನಿಸಿ ಎಂದು ಪೋಲೀಸರ ಹಿಂದೆಯೇ ಈಗ ಸಿದ್ದಿಕ್ ನಡೆಯುತ್ತಿದ್ದಾರೆ! 

ಇದನ್ನೆಲ್ಲಾ ನೋಡಿದಾಗ ಪೋಲೀಸರ ಅಜೆಂಡಾ ಪ್ರಕರಣದ ತನಿಖೆಯೇ ಅಥವಾ ಅಮ್ಮಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿದ್ದಿಕ್ ನನ್ನು ಹೇಗಾದರೂ ಮಾಡಿ ಜೈಲಿಗೆ ಹಾಕಬೇಕೆಂಬ ವ್ಯರ್ಥ ಹಠದಂತೆ ಕಾಣಿಸುತ್ತಿದೆ. ಜೈಲಿಗೆ ಹಾಕದೆ ಪ್ರಶ್ನಿಸುವ ಹಂತಕ್ಕೆ ಬಂದರೆ ಪೋಲೀಸರು ಏನು ಮಾಡುವರೋ ಏನೋ? 

ಸುಪ್ರೀಂ ಕೋರ್ಟ್ ಮುಂದಿನ ಹಂತದಲ್ಲಿ ಪ್ರಕರಣವನ್ನು ಪರಿಗಣಿಸಿದಾಗ, ಅದು ಜಾಮೀನಿನ ಮುಂದುವರಿಕೆಯನ್ನು ನಿರಾಕರಿಸುತ್ತದೆ ಮತ್ತು ನಂತರ ಅವರು ಸಿದ್ದಿಕ್ ಅವರನ್ನು ಹಿಡಿದು ಜೈಲಿಗೆ ಕಳುಹಿಸಬಹುದು ಎಂದು ಪೋಲೀಸರು ನಿರೀಕ್ಷಿಸುತ್ತಿರಬಹುದು.

ಈಗ ಪ್ರಶ್ನಿಸಿದರೆ, ಎರಡು ವಾರಗಳ ನಂತರ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸುವಾಗ, ಸಿದ್ದಿಕ್ ಪ್ರಶ್ನಿಸಿದ ಸಂದರ್ಭಕ್ಕೆ ಶಾಶ್ವತ ಜಾಮೀನು ನೀಡಬೇಕು ಎಂಬ ವಾದವನ್ನು ಮುಂದಿಡುತ್ತಾರೆ ಮತ್ತು ಅದನ್ನು ತಡೆಯಲು ಪೋಲೀಸರು ಬುದ್ಧಿವಂತಿಕೆ ತೋರಿಸುವರೇ ಎಂದು ಕಾದುನೋಡಬೇಕಷ್ಟೆ! .

ಆದರೆ ಎರಡು ವಾರ ಕಳೆದರೂ ಏಕೆ ಪ್ರಶ್ನಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಳಿದರೆ ಏನು ಮಾಡೋದು? ಗೊತ್ತಿಲ್ಲ. ಹೊಸ ಕಥೆ, ನಿರ್ದೇಶಕರು ಬರಬೇಕೇನೋ?!



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries