ಸಮರಸ ಚಿತ್ರಸುದ್ದಿ: ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಸಮಿತಿಯ ಪರವಾಗಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ರಾ.ಹೆದ್ದಾರಿ-66 ಗೆ ಅಡ್ಡಲಾಗಿ ಪಾದಚಾರಿ ಮೇಲ್ಸೇತುವೆ / ಅಂಡರ್ಪಾಸೇಜ್ ನಿರ್ಮಿಸಲು ಮುಖಂಡೆ ಅಶ್ವಿನಿ ಎಂ.ಎಲ್. ವಿನಂತಿಸಿರುವರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಕಚೇರಿ, ಪ್ರದೇಶದಲ್ಲಿ ಪಾದಚಾರಿ ಸುರಕ್ಷತೆಯನ್ನು ಸುಧಾರಿಸಲು ಮನವಿ ಸಲ್ಲಿಸಲಾಗಿದೆ.