HEALTH TIPS

ಶಬರಿಮಲೆ; ಕೇವಲ ವರ್ಚುವಲ್ ಕ್ಯೂ ಇದ್ದರೆ, ಆಂದೋಲನ ನಡೆಸುವೆವು: ಯಾವುದೇ ಬುಕ್ಕಿಂಗ್ ಇಲ್ಲದೆ ಭಕ್ತರಿಗೆ ಪ್ರವೇಶ ನೀಡಲು ನಾವೇ ಮುಂದೆಬರುವೆವು: ಕೆ ಸುರೇಂದ್ರನ್

ಪತ್ತನಂತಿಟ್ಟ: ಶಬರಿಮಲೆಯಲ್ಲಿ ವರ್ಚುವಲ್ ಸರತಿ ಸಾಲುಗಳನ್ನು ಮಿತಿಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟಿಸಲಿದೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ. ಭಕ್ತರಿಗೆ ಟಿಕೆಟ್ ಕಾಯ್ದಿರಿಸದೆ ಶಬರಿಮಲೆಗೆ ಪ್ರವೇಶ ಮಾಡಲಾಗುವುದು. ವರ್ಚುವಲ್ ಕ್ಯೂ ಇಲ್ಲದೆ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನ ನೆಪದಲ್ಲಿ ಶಬರಿಮಲೆಯನ್ನು ಕೆಡವಲು ಯತ್ನಿಸಿದವರ ವಿರುದ್ದ ಹೋರಾಡಿ ಗೆದ್ದವರು ನಾವೇ. ಯಾವ ಭಕ್ತನನ್ನೂ ತಡೆಯಲು ಸಾಧ್ಯವಿಲ್ಲ. ಶಬರಿಮಲೆಗೆ ಭೇಟಿ ನೀಡಲು ಬಯಸುವ ಭಕ್ತರನ್ನು ವರ್ಚುವಲ್ ಕ್ಯೂ ಇಲ್ಲದೆ ನಾವು ಕರೆತರುತ್ತೇವೆ ಎಂದು ಅವರು ಹೇಳಿದರು.

ಈ ಬಾರಿ ಶಬರಿಮಲೆ ದರ್ಶನ ಆನ್‍ಲೈನ್ ಬುಕ್ಕಿಂಗ್ ಮೂಲಕ ಮಾತ್ರ ಎಂದು ದೇವಸ್ವಂ ಮಂಡಳಿ ನಿನ್ನೆ ಸ್ಪಷ್ಟಪಡಿಸಿತ್ತು. ಸ್ಪಾಟ್ ಬುಕ್ಕಿಂಗ್ ಅನ್ನು ಸಂಪೂರ್ಣವಾಗಿ ತಪ್ಪಿಸಿ ಆನ್‍ಲೈನ್ ಬುಕಿಂಗ್ ಮೂಲಕ ದಿನಕ್ಕೆ 80,000 ಭಕ್ತರಿಗೆ ಮಾತ್ರ ದರ್ಶನವನ್ನು ಕಾಯ್ದಿರಿಸುವ ನಿರ್ಧಾರದ ಬಳಿಕ  ವಿವಾದ ಉಂಟಾಗಿದೆ.

ಈ ನಿರ್ಧಾರದ ವಿರುದ್ಧ ಹಿಂದೂ ಸಂಘಟನೆಗಳು ಒಗ್ಗೂಡಿದ್ದರೂ ಸರ್ಕಾರ ಮತ್ತು ದೇವಸ್ವಂ ಮಂಡಳಿ ಈ ನಿರ್ಧಾರವನ್ನು ಸರಿಪಡಿಸಲು ಇನ್ನೂ ಮುಂದಾಗಿಲ್ಲ. ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರವೇ ನಿರ್ಧಾರ ಕೈಗೊಳ್ಳಲಿದೆ ಎಂಬುದು ದೇವಸ್ವಂ ಮಂಡಳಿಯ ನಿಲುವು. ಆಂಧ್ರ, ಕರ್ನಾಟಕ ಮತ್ತು ತಮಿಳುನಾಡಿನಂತಹ ರಾಜ್ಯಗಳ ದೂರದ ಹಳ್ಳಿಗಳಿಂದ ಬರುವ ಭಕ್ತರಿಗೆ ವರ್ಚುವಲ್ ಕ್ಯೂ ಬುಕ್ಕಿಂಗ್ ಬಗ್ಗೆ ತಿಳಿದಿರುವುದಿಲ್ಲ. ಅವರು ಪಂಬಾ ಮತ್ತು ನಿಲಯ್ಕಲ್‍ನಲ್ಲಿರುವ ಸ್ಪಾಟ್ ಬುಕಿಂಗ್ ಕೌಂಟರ್‍ಗಳನ್ನು ಅವಲಂಬಿಸಿದ್ದಾರೆ. ಕಳೆದ ವರ್ಷ, ಸ್ಪಾಟ್ ಬುಕ್ಕಿಂಗ್ ಮೂಲಕ ದಿನಕ್ಕೆ 10,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಯಿತು. ಆದರೆ ಕಳೆದ ವರ್ಷ ಸರ್ಕಾರದ ಎಡವಟ್ಟಿನಿಂದಾಗಿ ಉಂಟಾದ ಜನದಟ್ಟಣೆಯಿಂದ ಈ ಬಾರಿ ಸ್ಪಾಟ್ ಬುಕ್ಕಿಂಗ್ ತಪ್ಪಿಸುವ ನಿರ್ಧಾರಕ್ಕೆ ಬರಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries