ಕಾಸರಗೋಡು: ಕಣ್ಣೂರು ಎಡಿಎಂ ನವೀನ್ ಬಾಬು ನಿಗೂಢ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೇರಳ ಎನ್ಜಿಓ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎ.ಟಿ.ಶಶಿ ಆಗ್ರಹಿಸಿದ್ದಾರೆ. ನವೀನ್ ಬಾಬು ಆತ್ಮಹತ್ಯೆಗೆ ಪ್ರೇರಣೆ ನೀಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಕಾಸರಗೋಡು ಸಿವಿಲ್ ಸ್ಟೇಶನ್ ವಠಾರದಲ್ಲಿ ಎನ್ಜಿಓ ಸಂಘದ ಜಿಲ್ಲಾ ಸಮಿತಿಯಿಂದ ನಡೆದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು. ಎಡರಂಗ ಆಡಳಿತದಲ್ಲಿ ತನ್ನದೇ ಪಕ್ಷದ ಪೋಷಕ ಕಾರ್ಮಿಕ ಸಂಘಟನೆಗೆ ಸೇರಿದವರಿಗೂ ನೆಲೆಯಿಲ್ಲದ ಪರಿಸ್ಥಿತಿ ಎದುರಾಗಿದೆ ಎಂಬುದಕ್ಕೆ ನವೀನ್ ಬಾಬು ಅವರ ಸಾವು ನಿದರ್ಶನವಾಗಿದೆ ಎಂದು ತಿಳಿಸಿದರು.
'ಸೆಟೊ'ಅಧ್ಯಕ್ಷರುಕೆ.ಎ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಘರಾಜ್ಯ ಕಾರ್ಯದರ್ಶಿಗಳುಜಾಯ್ ಫ್ರಾನ್ಸಿಸ್ಸುರೇಶ್ ಪೆರಿಯಂಗನಂಲೋಕೇಶ್ ಎಂ.ಬಿ.ಆಚಾರ್ವತ್ಸಲಕೃµನ್ಎಸ್ಎಂ ರಜಿನಿಜಿಲ್ಲಾ ಕಾರ್ಯದರ್ಶಿ ಎಂ ಶ್ರೀನಿವಾಸನ್, ಜಿಲ್ಲಾ ಕೋಶಾಧಿಕಾರಿ ವಿ ಎಂ ರಾಜೇಶ್, ವಿಟಿಪಿ ರಾಜೇಶ್ ಪಿ.ಕುಞÂಕೃಷ್ಣನ್, ಪ್ರವೀಣ್ ವರಯಿಲ್ಲಂ, ಶ್ರೀನಿಮೋನ್ ಕಾಞಂಗಾಡ್, ಜಗದೀಶ ನಾಯರ್, ರತೀಶ್ ಬಂದಡ್ಕ, ಶಫೀಕ್ ತ್ರಿಕರಿಪುರ, ಶಜಿಲ್ ಪಿಣರಾಯಿ, ಗಿರಿಜಾ, ಪ್ರಸೀತಾ ನೇತೃತ್ವ ವಹಿಸಿದ್ದರು.