ಕೊಲ್ಲಂ: ಆಲಪ್ಪುಳದ ತ್ರಿಕುನ್ನಪುಳದಲ್ಲಿ ಡಾ ವಂದನದಾಸ್ ಸ್ಮಾರಕ ಕ್ಲಿನಿಕ್ ಇಂದು ಕಾರ್ಯಾರಂಭಗೊಂಡಿದೆ. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಇಂದು ಸಂಜೆ 4 ಗಂಟೆಗೆ ಕ್ಲಿನಿಕ್ ಅನ್ನು ಉದ್ಘಾಟಿಸಿದರು.
ಬೆಳಗ್ಗೆ 7 ಗಂಟೆಗೆ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಿ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು. ವಂದನಾಳ ಪೋಷಕರು ಪಲ್ಲನೈಯಾರ್ ತೀರದಲ್ಲಿ ಕ್ಲಿನಿಕ್ ಅನ್ನು ನಿರ್ಮಿಸಿದರು, ಕ್ಲಿನಿಕ್ ಅನ್ನು ತಮ್ಮ ಪುತ್ರಿಯ ದೊಡ್ಡ ಕನಸನ್ನು ನನಸಾಗಿಸಿದರು.
ಕೊಟ್ಟಾಯಂ ಕಟ್ಟುರುತ್ತಿ ಮುಟ್ಟುಚಿರ ನಂಬಿಚಿರಕಲದ ತ್ರಿಕುಣಪುಳ ವಲಿಯಪರಂಬ್ ಮೆಡೈಲ್ನ ಕೆ.ಜಿ.ಮೋಹನದಾಸ್ ಮತ್ತು ಟಿ.ವಸಂತಕುಮಾರಿ ದಂಪತಿಯ ಏಕೈಕ ಪುತ್ರಿ ವಂದನಾ. ವಂದನಾಳ ತಾಯಿ ವಸಂತಕುಮಾರಿ ಕುಟುಂಬದ ಪಾಲು ಪಡೆದ ಜಾಗದಲ್ಲಿ ಕ್ಲಿನಿಕ್ ನಿರ್ಮಿಸಲಾಗಿದೆ. ನಿತ್ಯ ಇಬ್ಬರು ವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ. ವಂದನಾ ಅವರ ಸ್ನೇಹಿತರು ಸೇರಿದಂತೆ ಇತರರು ಕ್ಲಿನಿಕ್ನಲ್ಲಿ ಸೇವೆಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಇದೇ 11ರಂದು ವಿವಿಧ ವೈದ್ಯಕೀಯ ಕಾಲೇಜುಗಳ ತಜ್ಞ ವೈದ್ಯರ ನೇತೃತ್ವದಲ್ಲಿ ವೈದ್ಯಕೀಯ ಶಿಬಿರ ನಡೆಯಲಿದೆ. ಮಗಳ ಕನಸು ನನಸಾಗಿದೆ ಎಂದು ವಂದನಾಳ ತಾಯಿ ಹೇಳಿದ್ದಾರೆ. ವಂದನಾ ಹೆಸರಿನಲ್ಲಿ ಚಿಕಿತ್ಸಾಲಯವೊಂದು ತೆರೆಯುವುದು ಈ ಹಿಂದೆ ಕಂಡ ಕನಸಾಗಿತ್ತೆಂದು ತಿಳಿಸಿದ್ದಾರೆ. ಮಗಳು ಬದುಕಿರುವಾಗಲೇ ಕ್ಲಿನಿಕ್ ಆರಂಭಿಸಲು ಬಯಸಿದ್ದರು. ವಂದನಾಳ ನೆನಪಿನಲ್ಲಿ ಕ್ಲಿನಿಕ್ ಆರಂಭಿಸಬೇಕು ಎಂದುಕೊಂಡಿರಲಿಲ್ಲ ಎಂದು ಅಮ್ಮ ಕಣ್ಣೀರಿಟ್ಟರು. ಡಾ.ವಂದನದಾಸ್ ಸ್ಮಾರಕ ಚಿಕಿತ್ಸಾಲಯವು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಿದೆ ಎಂದು ತಾಯಿ ಹೇಳಿದರು.
ಮೇ 10, 2023 ರಂದು, ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗಾಗಿ ಪೆÇಲೀಸರು ಕರೆತಂದಿದ್ದ ಕುಡವತ್ತೂರಿನ ಸಂದೀಪ್ ಎಂಬವರ ದಾಳಿಯಲ್ಲಿ ಹೌಸ್ ಸರ್ಜರಿ ವಿದ್ಯಾರ್ಥಿಯಾಗಿದ್ದ ವಂದನಾ ಸಾವನ್ನಪ್ಪಿದ್ದರು.