HEALTH TIPS

ಭದ್ರತಾ ಲೋಪ: ಕುಮಾರಕಂಗೆ ಆಟೋದಲ್ಲಿ ಪ್ರಯಾಣಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ ಅಧಿಕೃತ ವಾಹನ ಲಭಿಸದೆ ಉಂಟಾದ ಗೊಂದಲ

ಮಣ್ಣಾರ್ ಶಾಲಾ: ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಭದ್ರತಾ ವ್ಯವಸ್ಥೆಯಲ್ಲಿ ವೈಫಲ್ಯ ಕಂಡುಬಂದಿದೆ. ಮಣ್ಣಾರ್ ಶಾಲಾ ನಾಗರಾಜ ದೇವಸ್ಥಾನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ ವೇಳೆ ಲೋಪ ಸಂಭವಿಸಿದೆ.

ಕೇಂದ್ರ ಸಚಿವ ಸುರೇಶ್ ಗೋಪಿ ಐದು ನಿಮಿಷ ಕಾದು ನಿಂತಿದ್ದ ಅಧಿಕೃತ ವಾಹನವನ್ನು ನೋಡದೆ ಆಟೋ ರಿಕ್ಷಾದಲ್ಲಿ ಪ್ರಯಾಣ ಮುಂದುವರಿಸಿದರು. ದೇವಸ್ಥಾನದ ದೀಪಾಕ್ಷರ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ನಂತರ ವಾಪಸ್ ತೆರಳುವಾಗ ಅಧಿಕೃತ ವಾಹನ ತಡವಾಗಿ ಬಂದಿದೆ..

ದೇವಸ್ಥಾನದ ಪೂರ್ವ ಭಾಗದ ರಸ್ತೆಯಲ್ಲಿ ಐದು ನಿಮಿಷಕ್ಕೂ ಹೆಚ್ಚು ಕಾಲ ವಾಹನಕ್ಕಾಗಿ ಕಾದು ನಿಂತಿದ್ದರು. ಅದೇ ವೇಳೆಗೆ ಸಂಸದರ ಅಧಿಕೃತ ವಾಹನ ದಳ ಪಶ್ಚಿಮ ಭಾಗದಲ್ಲಿ ಅವರಿಗಾಗಿ ಕಾಯುತ್ತಿತ್ತು. ವಾಹನ ತಡವಾಗಿ ಬಂದಿರುವುದನ್ನು ಕಂಡು ಸುರೇಶಗೋಪಿ ಅಲ್ಲೇ ನಿಂತಿದ್ದ  ಆಟೋ ರಿಕ್ಷಾವನ್ನು ಹತ್ತಿ ಆಟೋ ಚಾಲಕನನ್ನು ಕುಮಾರಕಂಗೆ ಹೋಗುವಂತೆ ಹೇಳಿದ್ದಾರೆ.

ಆಟೋ ಚಾಲಕ ಮೊದಲು ತಡಬಡಾಯಿಸಿದರೂ ಅಟೋ ಚಲಾಯಿಸಿ ಕರೆದೊಯ್ದರು. ಆದರೆ ಎರಡು ಕಿಲೋಮೀಟರ್ ಕ್ರಮಿಸಿ ಹರಿಪಾದ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ತಲುಪುವಷ್ಟರಲ್ಲಿ ಸಂಸದರ ಬೆಂಗಾವಲು ಪಡೆ ಧಾವಿಸಿತು. ಬಳಿಕ ಅಧಿಕೃತ ವಾಹನದಲ್ಲಿ ಪ್ರಯಾಣ ಮುಂದುವರಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries