HEALTH TIPS

ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು

 ಜೆರುಸಲೇಂ: ವಿಶ್ವ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ಭಾರತ ಹಾಗೂ ಇಸ್ರೇಲ್ ನಡುವಣ ಸ್ನೇಹ ಬಾಂಧವ್ಯದ 'ಚಾಂಪಿಯನ್' ಎಂದು ಬಣ್ಣಿಸಿದ್ದಾರೆ.

ಟಾಟಾ ಸಂಸ್ಥೆಯ ಮಾಜಿ ಮುಖ್ಯಸ್ಥ ರತನ್ ಟಾಟಾ (86) ಬುಧವಾರ ರಾತ್ರಿ ನಿಧನರಾದರು.

ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿರುವ ಬೆಂಜಮಿನ್, ಭಾರತ ಹಾಗೂ ಇಸ್ರೇಲ್ ನಡುವಣ ಬಾಂಧವ್ಯ ವೃದ್ಧಿಯಲ್ಲಿ ರತನ್ ಟಾಟಾ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.


'ನಾನು ಮತ್ತು ಇಸ್ರೇಲ್‌ನ ಜನತೆ ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ರತನ್ ಟಾಟಾ ಅವರು ಉಭಯ ದೇಶಗಳ ನಡುವಣ ಸ್ನೇಹ ಬಾಂಧವ್ಯದ ಚಾಂಪಿಯನ್' ಎಂದು ಹೇಳಿದ್ದಾರೆ.

ರತನ್ ಟಾಟಾ ಅವರ ಕುಟುಂಬಕ್ಕೆ ನನ್ನ ಸಂತಾಪಗಳನ್ನು ಸೂಚಿಸುವಂತೆ ಪ್ರಧಾನಿ ಮೋದಿ ಅವರಿಗೆ ನೆತನ್ಯಾಹು ತಿಳಿಸಿದ್ದಾರೆ.

ಸಿಂಗಪುರ ನೂತನ ಪ್ರಧಾನಿ ಲಾರೆನ್ಸ್‌ ವಾಂಗ್‌ ಸಹ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದು, 'ರತನ್ ಟಾಟಾ ತಮ್ಮ ದೇಶದ ನಿಜವಾದ ಸ್ನೇಹಿತ' ಎಂದು ಬಣ್ಣಿಸಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸಹ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದು, ನಾವೀನ್ಯತೆ ಮತ್ತು ಭಾರತ-ಫ್ರಾನ್ಸ್‌ನಲ್ಲಿ ಕೈಗಾರಿಕೋದ್ಯಮ ವೃದ್ಧಿಸುವಲ್ಲಿ ಟಾಟಾ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries