HEALTH TIPS

ಸರ್ಕಾರದ ನಡೆಗಳಿಂದ ಆತಂಕಗೊಂಡ ಅಯ್ಯಪ್ಪ ಭಕ್ತರು; ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಮನೋಜ್ ಅಬ್ರಹಾಂ ನೇಮಕದಲ್ಲಿ ನಿಗೂಢತೆ

ತಿರುವನಂತಪುರಂ: ಸಾಂಪ್ರದಾಯಿಕ ಕಾನನ ಪಥದ ಮೂಲಕ ಶಬರಿಮಲೆ ಯಾತ್ರೆಗೆ ಕೂಡ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಆರಂಭವಾಗಿದ್ದು, ಅಯ್ಯಪ್ಪ ಭಕ್ತರು ಕಂಗಾಲಾಗಿದ್ದಾರೆ.

ಶಬರಿಮಲೆಯಿಂದ ಭಕ್ತರನ್ನು ದೂರವಿಡುವ ತಂತ್ರದ ಭಾಗವೇ ದಿನಕ್ಕೆ 80 ಸಾವಿರ ಮಂದಿಗೆ ಮಾತ್ರ ಪ್ರವೇಶ ವ್ಯವಸ್ಥೆ ಎಂಬ ಸಂಶಯ ಬಲವಾಗುತ್ತಿದೆ. ಇದಲ್ಲದೇ ಶಬರಿಮಲೆಯ ಸಮನ್ವಯ ಉಸ್ತುವಾರಿಯ ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿ ಮನೋಜ್ ಅಬ್ರಹಾಂ ಅವರನ್ನು ನೇಮಿಸಲಾಗಿದೆ. ಶಬರಿಮಲೆ ಆಂದೋಲನದ ವೇಳೆ ಭಕ್ತರನ್ನು ಥಳಿಸಿ ಅಯ್ಯಪ್ಪನ ಮೂರ್ತಿಯನ್ನು ತುಳಿದ ಅಧಿಕಾರಿ ಮನೋಜ್ ಅಬ್ರಹಾಂ. ಯುವತಿಯರು ಬಂದರೆ ಒಳ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂಬ ನಿಲುವನ್ನೂ ತೆಗೆದುಕೊಳ್ಳಲಾಗಿದೆ. ಅಂತಹವರನ್ನು ಶಬರಿಮಲೆ ಉಸ್ತುವಾರಿಗೆ ಕರೆತರುವ ಬಗ್ಗೆಯೂ ಚಿಂತಿಸಲಾಗುತ್ತಿದೆ.

2018 ರ ಮೊದಲು, ಭಕ್ತರಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಎಷ್ಟೇ ಜನ ಬಂದರೂ ವಿಸ್ತರಿಸಲು ಸೌಲಭ್ಯ ಕಲ್ಪಿಸಲಾಗಿತ್ತು. ದೇವಸ್ವಂ ಮಂಡಳಿ ಹಾಗೂ ಭಕ್ತ ಸಂಘಟನೆಗಳಿಂದ ಅನ್ನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. 2018 ರಲ್ಲಿ, ನಂಬಿಕೆಗಳನ್ನು ಬುಡಮೇಲು ಮಾಡಿ ಯುವತಿ ಪ್ರವೇಶನ ಆರಂಭಿಸಿದ ಸರ್ಕಾರವು ಭಕ್ತರನ್ನು ಶಬರಿಮಲೆಯಿಂದ ದೂರ ಸರಿಸಲು ಪ್ರಾರಂಭಿಸಿತು. ಅಂದಿನಿಂದ ಪಿಣರಾಯಿ ಸರ್ಕಾರ ಮತ್ತು ಪೋಲೀಸರು ಭಕ್ತಾದಿಗಳ ಸಂಖ್ಯೆ ಕಡಿಮೆ ಮಾಡುವ ಪ್ರಸ್ತಾವನೆಯೊಂದಿಗೆ ಕಾನೂನುಗಳನ್ನು ರಚಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries