HEALTH TIPS

ವಕ್ಫ್ ಮಸೂದೆ | ಕಲಾಪದ ವಿವರ ತಿಳಿಸಿಲ್ಲ: ಸಮಿತಿ ಅಧ್ಯಕ್ಷ ಸ್ಪಷ್ಟನೆ

           ವದೆಹಲಿ: 'ಸಭೆಯ ಚರ್ಚೆಯ ವಿವರಗಳನ್ನು ನಾನು ಬಹಿರಂಗಪಡಿಸಿಲ್ಲ, ಸಭೆಯಲ್ಲಾದ ಅನುಚಿತ ಘಟನೆ ಕುರಿತಂತೆ ಮಾತ್ರ ಮಾತನಾಡಿದ್ದೆನೆ' ಎಂದು ವಕ್ಫ್‌ ಮಸೂದೆ ಕುರಿತು ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್ ಹೇಳಿದ್ದಾರೆ.

         ಟಿಎಂಸಿ ಸದಸ್ಯ ಕಲ್ಯಾಣ್‌ ಬ್ಯಾನರ್ಜಿ ಅವರು ಸಭೆಯಲ್ಲಿ ಗಾಜಿನ ಲೋಟ ಒಡೆದುಹಾಕಿದ ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಅಧ್ಯಕ್ಷರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಈ ಸ್ಪಷ್ಟನೆ ನೀಡಿದ್ದಾರೆ.

          ಡಿಎಂಕೆ ಸದಸ್ಯ ಎ.ರಾಜಾ, ಎಎಪಿ ಸದಸ್ಯ ಸಂಜಯ್‌ ಸಿಂಗ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಪಾಲ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.

          'ನಾನು ಎಂದಿಗೂ ನಿಯಮಗಳಿಗೆ ಬದ್ಧನಾಗಿದ್ದೇನೆ ಹಾಗೂ ಸದನದ ಘನತೆಯನ್ನು ಎತ್ತಿಹಿಡಿದಿದ್ದೇನೆ' ಎಂದು ಅವರು ಪ್ರತಿಪಾದಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries