HEALTH TIPS

ಹಿಜ್ಬುಲ್ಲಾ ಗುರಿಯಾಗಿಸಿ ದಾಳಿ: ಭೂಸೇನೆ ಕಾರ್ಯಾಚರಣೆಗೆ ಇಸ್ರೇಲ್‌ ಸಜ್ಜು

        ಜೆರುಸಲೇಂ: ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಈಗ ಭೂಸೇನೆ ದಾಳಿಗೆ ಇಸ್ರೇಲ್‌ ಮುಂದಾಗಿದೆ. ದಕ್ಷಿಣ ಲೆಬನಾನ್‌ನ ಗಡಿಭಾಗದಲ್ಲಿ ನೆಲಸಿರುವ 24ಕ್ಕೂ ಹೆಚ್ಚು ಸಮುದಾಯಗಳ ನಿವಾಸಿಗಳಿಗೆ ಆ ಪ್ರದೇಶ ಬಿಟ್ಟು ಹೋಗುವಂತೆ ತಾಕೀತು ಮಾಡಿದೆ.

         'ಎಕ್ಸ್‌' ಮೂಲಕ ಈ ಎಚ್ಚರಿಕೆ ನೀಡಿರುವ ಸೇನೆಯ ವಕ್ತಾರರು, 'ಗಡಿಯಿಂದ 60 ಕಿ.ಮೀ.

ದೂರದ ಅವಾಲಿ ನದಿಯ ಉತ್ತರ ಭಾಗದಿಂದ ನಿವಾಸಿಗಳು ತೆರವುಗೊಳ್ಳಬೇಕು' ಎಂದು ಸೂಚಿಸಿದ್ದಾರೆ.

'ಕಾರ್ಯಾಚರಣೆಗೆ 4 ಹೆಚ್ಚುವರಿ ತುಕಡಿ ನಿಯೋಜಿಸಿದೆ. ಕಾರ್ಯಾಚರಣೆ ವೇಳೆ ಬೈರೂತ್ ಅಥವಾ ಇತರೆ ನಗರಗಳ ಮೇಲೆ ದಾಳಿ ನಡೆಸುವುದಿಲ್ಲ' ಎಂದು ಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.              ಹಿಜ್ಬುಲ್ಲಾ ಗುರಿಯಾಗಿಸಿ ಈ ಸೀಮಿತ ಕಾರ್ಯಾಚರಣೆ ನಡೆಯಲಿದೆ' ಎಂದು ವಕ್ತಾರರು ತಿಳಿಸಿದ್ದಾರೆ.

ಇನ್ನೊಂದೆಡೆ ವಾಯುದಾಳಿಯನ್ನೂ ಇಸ್ರೇಲ್‌ ಮುಂದುವರಿದಿದೆ. ಹಿಜ್ಬುಲ್ಲಾ ಬಂಡುಕೋರರು ನೆಲಸಿದ್ದಾರೆ ಎಂದು ಶಂಕಿಸಲಾದ ಬೈರೂತ್ ವಲಯದಲ್ಲಿ ದಾಳಿ ಶಬ್ದ, ದಟ್ಟ ಹೊಗೆ ಕಂಡುಬಂತು.

ನೇರ ಸಂಘರ್ಷಕ್ಕೆ ಸಿದ್ಧ: ಇನ್ನೊಂದೆಡೆ 'ನೇರ ಸಂಘರ್ಷಕ್ಕೆ ಸಿದ್ಧ' ಎಂದು ಹಿಜ್ಬುಲ್ಲಾ ಸಂಘಟನೆಯ ವಕ್ತಾರರು ತಿಳಿಸಿದ್ದಾರೆ. ಹಿಜ್ಬುಲ್ಲಾದ ನಾಯಕರಾದ ಹಸನ್‌ ನಸ್ರಲ್ಲಾ ಹಾಗೂ ಇತರೆ ನಾಯಕರ ಹತ್ಯೆಯ ಬಳಿಕವೂ ಈ ಹೇಳಿಕೆ ಹೊರಬಿದ್ದಿದೆ.

             ಹಿಜ್ಬುಲ್ಲಾದ ಹಂಗಾಮಿ ನಾಯಕ ನೈಮ್ ಕಸೀಮ್ ಸುದ್ದಿ ವಾಹಿನಿ ಮೂಲಕ ಸಂಘಟನೆಯ ನಿಲುವನ್ನು ಪ್ರಕಟಿಸಿದ್ದಾರೆ. 'ಇಸ್ರೇಲ್‌ ಭೂದಾಳಿ ಮುಂದುವರಿಸಿದರೆ, ಅದನ್ನು ಎದುರಿಸಲು ಸಿದ್ಧರಿದ್ದೇವೆ. ಇತ್ತೀಚೆಗೆ ಹತ್ಯೆಯಾದ ನಾಯಕರ ಸ್ಥಾನದಲ್ಲಿ ಹೊಸಬರ ನೇಮಕ ಆಗಿದೆ' ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries