ಕೊಲ್ಲಂ: ಬೋಧನೆ ಅತ್ಯುತ್ತಮ ಸೇವೆಯಾಗಿದೆ. ಶಿಕ್ಷಕರು ಇತರ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠರನ್ನು ಸೃಷ್ಟಿಸುತ್ತಾರೆ. ಆದರೆ ಆಗಾಗ್ಗೆ ಆ ಶ್ರೇಷ್ಠತೆಯನ್ನು ಗುರುತಿಸುವುದಿಲ್ಲ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಕರು ಮೌಲ್ಯಯುತ ಶಿಕ್ಷಣ ನೀಡುವಂತಾಗಬೇಕು. ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ಏನು ಕೊಡುಗೆ ನೀಡುತ್ತದೆ ಎಂಬುದರ ಕುರಿತು ನಾವು ಯೋಚಿಸಬೇಕು. ನಾವು ಬದಲಾದ ಕಾಲದಲ್ಲಿ ಬದುಕುತ್ತಿದ್ದೇವೆ. ಬದಲಾವಣೆಗಳನ್ನು ಸ್ವೀಕರಿಸುವಾಗ, ಏನನ್ನಾದರೂ ಕಳೆದುಕೊಳ್ಳದಂತೆ ನಾವು ಜಾಗರೂಕರಾಗಿರಬೇಕು. ಇದರಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ದೊಡ್ಡದು ಎಂದು ಮಹಿಳಾ ಆಯೋಗದ ಮಾಜಿ ಸದಸ್ಯೆ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಡಾ. ಜೆ. ಪ್ರಮೀಳಾ ದೇವಿ ಹೇಳಿರುವರು.
ರಾಷ್ಟ್ರೀಯ ಶಿಕ್ಷಕರ ಪರಿಷತ್ತು (ಎನ್ಟಿಯು) ರಾಜ್ಯ ಮಹಿಳಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೊಕ್ಕಿಯಂ ಶಕ್ತಿಪಾದ ಅದೈವತಾಶ್ರಮದಲ್ಲಿ ಸ್ವಾಮಿನಿ ದಿವ್ಯಾನಂದಪುರಿ ಆಶೀರ್ವಚನ ನೀಡಿದರು. ಭಾರತದ ವಿಶಿಷ್ಟ ಸಂಸ್ಕೃತಿ ಉಳಿಯಬೇಕು ಎಂಬ ದೃಷ್ಟಿಯಲ್ಲಿ ಶಿಕ್ಷಕರು ಕೆಲಸ ಮಾಡಬೇಕು. ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಧರ್ಮ ಪ್ರಜ್ಞೆ ಮೂಡಿಸಲು ಸಾಧ್ಯವಾಗಬೇಕು ಎಂದು ಸ್ವಾಮಿನಿ ಹೇಳಿದರು
ಎನ್ ಟಿಯು ರಾಜ್ಯಾಧ್ಯಕ್ಷ ಪಿ.ಎಸ್. ಗೋಪಕುಮಾರ್ ಪ್ರಧಾನ ಭಾಷಣ ಮಾಡಿದರು. ಗೋಪಕುಮಾರ್ ಅವರು ರಾಮಾಯಣ ಮಾಸಾಚರಣೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಎನ್ ಟಿಯು ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಪಿ. ಶ್ರೀದೇವಿ ಅಧ್ಯಕ್ಷತೆ ವಹಿಸಿದ್ದರು. ಸಹ ಸಂಚಾಲಕಿ ಎ. ಸುಚಿತಾ, ಎನ್ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್, ಖಜಾಂಚಿ ಕೆ.ಕೆ. ಗಿರೀಶ್ ಕುಮಾರ್, ಉಪಾಧ್ಯಕ್ಷೆ ಕೆ. ಸ್ಮಿತಾ, ಕಾರ್ಯದರ್ಶಿ ಕೆ.ವಿ. ಬಿಂದು ಹಾಗೂ ರಾಜ್ಯ ಮಹಿಳಾ ಘಟಕದ ಪ್ರಧಾನ ಸಂಚಾಲಕಿ ಧನಲಕ್ಷ್ಮೀ ವಿರಿಯಾರಜಿಕಾತ್ ಮಾತನಾಡಿದರು.
ಕಾರ್ಪೋರೇಟ್ ತರಬೇತುದಾರ ಮತ್ತು ಸಮಾಲೋಚನೆ ಮನಶ್ಶಾಸ್ತ್ರಜ್ಞ ಎಸ್. ಸುರೇಶ್ ಕುಮಾರ್ ತರಗತಿ ನಡೆಸಿಕೊಟ್ಟರು. ಸಿನಿ ಕೃಷ್ಣಪುರಿ, ಗಿರಿಜಾದೇವಿ ಎಸ್, ಐಶ್ವರ್ಯ ಪಿ.ಎಸ್, ಎಸ್.ಕೆ.ದಿಲೀಪ್ ಕುಮಾರ್, ಎ. ಅನಿಲಕುಮಾರ್, ಕೆ.ಆರ್. ಸಂಧ್ಯಾ ಕುಮಾರಿ ಮತ್ತಿತರರು ಮಾತನಾಡಿದರು. ಮಧ್ಯಾಹ್ನ ಸರ್ಗವೇಳೆಯಲ್ಲಿ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಯಶ್ರೀ ಉಣ್ಣಿ ಕೃಷ್ಣನ್, ಸೋಜ ಮತ್ತು ದಿವ್ಯಾ. ನೇತೃತ್ವದಲ್ಲಿಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.