ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಶಾಲಾ ವಿದ್ಯಾರ್ಥಿನಿ, ಅಣಂಗೂರಿನಲ್ಲಿ ವ್ಯಾಪಾರಿಯಾಗಿರುವ ನವೀನ್ ಎಂಬವರ ಪುತ್ರಿ ಸಾನ್ವಿ ಎನ್.ಕೆ(12)ಗುರುವಾರ ಸಾವಿಗೀಡಾಗಿದ್ದಾಳೆ. ಕಾಸರಗೋಡು ಚಿನ್ಮಯಾ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಈಕೆ ಕಳೆದ ನಾಲ್ಕು ತಿಂಗಳಿಂದ ಅಸೌಖ್ಯ ಪೀಡಿತೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಳು.
ಐದು ವರ್ಷದ ಹಿಂದೆ ಸಾನ್ವಿ ತಾಯಿ ಅಸೌಖ್ಯ ಬಾಧಿಸಿ ಮೃತಪಟ್ಟಿದ್ದರೆ, ಅನಂತರ ಸಾನ್ವಿ ಸಹೋದರ ಸನ್ವಿತ್ ಕೂಡಾ ಇದೇ ರೀತಿ ಅಸೌಖ್ಯ ಬಾಧಿಸಿ ಮೃತಪಟ್ಟಿದ್ದನು. ಇದೀಗ ಸಾನ್ವಿ ಸಾವು ಕುಟುಂಬ ಹಾಗೂ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ.