HEALTH TIPS

ರೈಲು ಅಪಘಾತ ತಡೆಗೆ ಜಾಗೃತಿ ಕಾರ್ಯಕ್ರಮ ಇಂದಿನಿಂದ ಆರಂಭ

ತಿರುವನಂತಪುರಂ: ರೈಲು ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದೆ.

ಬೆಳಗ್ಗೆ 10.30ಕ್ಕೆ ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್ ಸಂಖ್ಯೆ 1ರಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.

ರೈಲ್ವೆ ಪೋಲೀಸ್ ಎಸ್ಪಿ ನಕುಲ್ ರಾಜೇಂದ್ರ ದೇಶಮುಖ್ ಮತ್ತು ರೈಲ್ವೇ ರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಅಧಿಕಾರಿ ತನ್ವಿ ಪ್ರಪುÅಲ್ ಗುಪ್ತಾ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ರೈಲುಗಳ ಮೇಲೆ ಕಲ್ಲು ತೂರಾಟ, ರೈಲು ಹಳಿಗಳ ಮೇಲೆ ಕಲ್ಲಿರಿಸುವುದು ಇತ್ಯಾದಿ ಅಪಘಾತಗಳು ಮತ್ತು ರೈಲು ಮಾರ್ಗಗಳನ್ನು ದಾಟುವಾಗ ಉಂಟಾಗುವ ರೈಲು ಅಪಘಾತಗಳ ವಿರುದ್ಧ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಂಬಂಧಿತ ಅಪರಾಧಗಳಲ್ಲಿ ಭಾಗಿಯಾಗಿರುವವರು ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮತ್ತು ಅರಿವು ಮೂಡಿಸಲಾಗುವುದು. 

ಇದೇ 7ರವರೆಗೆ ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತರಗತಿಗಳು, ನಾಟಕ ಪ್ರದರ್ಶನ, ಗಾಯನ ಮತ್ತು ಪೋಸ್ಟರ್ ವಿತರಣೆ ನಡೆಯಲಿದೆ. ರೈಲು ಹಳಿಗಳ ಸಮೀಪವಿರುವ ಶಾಲೆಗಳು ಮತ್ತು ರೈಲು ಘರ್ಷಣೆಗಳು ಸಂಭವಿಸುವ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ವಿಶೇಷ ಗಮನದೊಂದಿಗೆ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries