HEALTH TIPS

"ಎರಡು ಅಡಿಗಳ ಲಾಠಿ ಬೀಸಿ ಹೊಡೆಯಲು ಪ್ರಯತ್ನಿಸಬೇಡಿ!!" ಕಣ್ಣೂರು ಕಲೆಕ್ಟರೇಟ್ ಗೆ ಬಿಜೆಪಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಮೊಳಗಿದ ಘೋಷಣೆ: ಜಲಫಿರಂಗಿ ಪ್ರಯೋಗ

ಕಣ್ಣೂರು: ಎಡಿಎಂ ನವೀನ್ ಬಾಬು ಅವರ ನಿಧನವನ್ನು ಪ್ರತಿಭಟಿಸಿ ಬಿಜೆಪಿ ವತಿಯಿಂದ ಕಣ್ಣೂರು ಕಲೆಕ್ಟರೇಟ್‍ಗೆ ಪ್ರತಿಭಟನಾ ಮೆರವಣಿಗೆ ಇಂದು ನಡೆಸಲಾಯಿತು.

ಭಾರೀ ಪ್ರತಿಭಟನೆ ನಡೆಸಿದ ನಂತರ ಪೋಲೀಸರು ಮಹಿಳಾ ಕಾರ್ಯಕರ್ತೆಯರಿಗೆ ಥಳಿಸಿದ್ದಾರೆ ಎಂದು ದೂರಲಾಗಿದೆ. ಪ್ರತಿಭಟನಾಕಾರರ ಮೇಲೆ ಪೆÇಲೀಸರು ಜಲಫಿರಂಗಿ ಪ್ರಯೋಗಿಸಿದರು. ಕಾರ್ಯಕರ್ತರು ಬ್ಯಾರಿಕೇಡ್ ದಾಟಲು ಯತ್ನಿಸಿದಾಗ ಜಲಫಿರಂಗಿ ಹಾರಿಸಲಾಯಿತು. ಎರಡು ಅಡಿ ಉದ್ದದ ಲಾಠಿ ಬೀಸಿ ಹೊಡೆಯಲು ಯತ್ನಿಸಬೇಡಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಪೋಲೀಸರನ್ನು ಲೇವಡಿಗೈದರು. 

ಕಣ್ಣೂರು ಎಡಿಎಂ ನವೀನ್ ಬಾಬು ನಿಗೂಢ ಸಾವು ಪ್ರಕರಣದ ನ್ಯಾಯಾಂಗ ತನಿಖೆ, ಪಿ.ಪಿ.ದಿವ್ಯಾ ಬಂಧನ, ಕಣ್ಣೂರು ಜಿಲ್ಲಾಧಿಕಾರಿ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಕಣ್ಣೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿದರು. ಸಿಪಿಎಂ ನಿಲುವು ಮಾನವೀಯ ವಿರೋಧಿ ಎಂದು ಎಂಟಿ ರಮೇಶ್ ಟೀಕಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೂಚನೆ ಮೇರೆಗೆ ದಿವ್ಯಾ ಅವರನ್ನು ಬಂಧಿಸಿಲ್ಲ. ಮುಖ್ಯಮಂತ್ರಿ ಕಚೇರಿಯೇ ಎಲ್ಲ ಅಪರಾಧ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಕಣ್ಣೂರು ಜಿಲ್ಲಾಧಿಕಾರಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿದ್ದರೆ ಎಡಿಎಂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಜಿಲ್ಲೆಯಲ್ಲಿಯೇ ಈ ವಿಚಾರವಾಗಿ ಪ್ರತಿಕ್ರಿಯಿಸಲು ಸಿದ್ಧರಿಲ್ಲ. ಪಿಪಿ ದಿವ್ಯ ಅವರನ್ನು ಸಿಪಿಎಂ ರಕ್ಷಿಸುತ್ತಿರುವುದು ಹಗಲಿರುಳಿನಷ್ಟು  ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಕಚೇರಿಯ ಹಸ್ತಕ್ಷೇಪದಿಂದಲೇ ದಿವ್ಯಾ ಬಂಧನ ಮೊಟಕುಗೊಂಡಿದ್ದು,  ಮುಖ್ಯಮಂತ್ರಿ ದಿವ್ಯಾ ಜೊತೆಗಿದ್ದಾರೆ ಎಂದು ಎಂ.ಟಿ.ರಮೇಶ್ ಆರೋಪಿಸಿದರು.

ಪಿ.ಪಿ.ದಿವ್ಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆದರೆ ಬಂಧನ ವಿಳಂಬವಾಗುತ್ತಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries