HEALTH TIPS

ಕಾಸರಗೋಡು ದಸರಾ ಉದ್ಘಾಟನೆ: ಕನ್ನಡ ನಾಡು-ನುಡಿಯ ಆರಾಧನೆ, ತಾಯಿ ಭುವನೇಶ್ವರಿಯ ಉಪಾಸನೆ

 ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ನಡೆಯುವ ಕಾಸರಗೋಡು ದಸರಾ -2024 ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆಯಿತು. ವಿವಿದೆಡೆಗಳಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಕನ್ನಡ ನಾಡು-ನುಡಿಯ ಆರಾಧನೆ ಹಾಗು ತಾಯಿ ಭುವನೇಶ್ವರಿಯ ಉಪಾಸನೆ ಜರಗಲಿದೆ. 

ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಅಧ್ಯಾಪಕ ನಾರಾಯಣ ಮಾಸ್ತರ್ ಭಾಗವಹಿಸಿದರು. ಹರಿದಾಸ ಜಯಾನಂದ ಕುಮಾರ್ ಅವರಿಂದ ದಸರಾ ಸತ್ಸಂಗ ಜರಗಿತು. ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಅವರು ಅಭ್ಯಾಗತರಾಗಿ ಭಾಗವಹಿಸಿದರು. ಮಹಾ ವಿದ್ಯಾದಾಯಿನಿ ಫೌಂಡೇಶನ್ ಮಕ್ಕಳಿಂದ ಜಾನಪದ ನೃತ್ಯ, ಸಮೂಹ ಗಾಯನ, ಫಿಂಗರ್ ಡ್ರಮ್ಮರ್ ಮಣಿಕಂಠ ಆಚಾರ್ಯ ಕೋಟೂರು ಅವರಿಂದ ಫಿಂಗರ್ ಡ್ರಮ್ ವಾದನ ನಡೆಯಿತು. 

ಕಾಸರಗೋಡು ನಗರಸಭಾ ಮಾಜಿ ಸದಸ್ಯ ಶಂಕರ ಕೆ. ಸ್ವಾಗತಿಸಿ, ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries