HEALTH TIPS

ಎರುಮೇಲಿಯಲ್ಲಿ ಭಸ್ಮ ಧಾರಣೆಗಿದ್ದ ಶುಲ್ಕ ಮನ್ನಾಕ್ಕೆ ಕ್ರಮ: ದೇವಸ್ಥಾನದ ಆಚರಣೆ ಅಲ್ಲ ಎಂದು ದೇವಸ್ವಂ ಮಂಡಳಿ

ತಿರುವನಂತಪುರಂ: ಇನ್ನು ಮುಂದೆ ಎರುಮೇಲಿ ಶಾಸ್ತಾರ ದೇವಸ್ಥಾನದ ಆವರಣದಲ್ಲಿ ಉಚಿತ ಭಸ್ಮಧಾರಣೆಗೆ ಅವಕಾಶ ನೀಡಲಾಗದು ಎಂದು ದೇವಸ್ವಂ ಮಂಡಳಿ ತಿಳಿಸಿದೆ. ದೇವಸ್ಥಾನದ ಆಚರಣೆ ಅಲ್ಲದ ಕಾರಣ ವಿಧಿಸಲಾಗಿದ್ದ ಶುಲ್ಕ ಮೌಲ್ಯ ನಿಯಂತ್ರಿಸಲಾಗುವುದು ಎನ್ನಲಾಗಿದೆ. 

ಭಸ್ಮಧಾರಣೆಗೆ ಶುಲ್ಕ ಸಂಗ್ರಹಿಸಲು ನೀಡಿದ್ದ ಒಪ್ಪಂದಗಳನ್ನು ರದ್ದುಪಡಿಸಲು ದೇವಸ್ವಂ ಮಂಡಳಿ ನಿರ್ಧರಿಸಿದೆ. ಅಗತ್ಯ ಹೊಸ ಆಚರಣೆಗಳಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬರಿಮಲೆ ಯಾತ್ರಾರ್ಥಿಗಳಿಗೆ ಎರುಮೇಲಿ ಪ್ರಮುಖ ನಿಲ್ದಾಣವಾಗಿದೆ. ಐತಿಹಾಸಿಕ ಎರುಮೇಲಿ ಪೆಟ್ಟತುಳ್ಳಲ್ ಎರುಮೇಲಿ ಶಾಸ್ತಾ ದೇವಸ್ಥಾನದೊಂದಿಗೆ ಸಂಬಂಧಿಸಿದೆ. ಪೆಟ್ಟಾ ಮೊದಲು ಸಾಮೂಹಿಕವಾಗಿ ಸ್ನಾನ ಮಾಡುವ ಭಕ್ತರಿಗೆ ಕುಂಕುಮ, ಭಸ್ಮ ಸೇರಿದಂತೆ ನೈವೇದ್ಯವನ್ನು ನಾಟಪಂದಲ್ (ದ್ವಾರದ ಬಳಿಯ ಚಪ್ಪರ)ನಲ್ಲಿ ಅರ್ಪಿಸಲಾಗುತ್ತದೆ. ಇಲ್ಲಿನ ಭಸ್ಮ, ಮುಟ್ಟಿದರೆ 10 ರೂಪಾಯಿ ಶುಲ್ಕ ವಿಧಿಸುವ ನಿರ್ಧಾರಕ್ಕೆ ಭಕ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. 

ಇದಕ್ಕೆ ಗುತ್ತಿಗೆ ನೀಡಿರುವುದು ಕೂಡ ವಿವಾದಕ್ಕೀಡಾಗಿತ್ತು. ಭಸ್ಮ ಮುಟ್ಟಿ ಮುಖಕ್ಕೆ ಧರಿಸುವುದು  ಎರುಮೇಲಿ ಶಾಸ್ತಾ ದೇವಸ್ಥಾನ ಅಥವಾ ಶಬರಿಮಲೆಗೆ ಸಂಬಂಧಿಸಿದ ಆಚರಣೆಯಲ್ಲ ಎಂಬುದು ದೇವಸ್ವಂ ಮಂಡಳಿಯ ಹೊಸ ನಿಲುವು. ಈ ಹಿನ್ನಲೆಯಲ್ಲಿ ದೇವಸ್ವಂ ಮಂಡಳಿ ಭಸ್ಮ ಧಾರಣೆಗಿದ್ದ ಶುಲ್ಕ ರದ್ದುಗೊಳಿಸಿ ಒಪ್ಪಂದ ರದ್ದು ಮಾಡುವ ಬಗ್ಗೆ ಚಿಂತನೆ ನಡೆಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries