HEALTH TIPS

"ಮಾಧ್ಯಮ ಕಾರ್ಯಕರ್ತರು ನಾಯಿಗಳು": ಅವಹೇಳನಗೈದ ಎನ್.ಎನ್.ಕೃಷ್ಣದಾಸ್; ದುರಹಂಕಾರವನ್ನು ಸಾಬೀತುಪಡಿಸಿದ ಸಿಪಿಎಂ

ಪಾಲಕ್ಕಾಡ್: ನಿಮಗೆ ಈ ಪಕ್ಷದ ಬಗ್ಗೆ ಒಂದು ಪದವೂ ತಿಳಿದಿಲ್ಲ ಮಾತ್ರವಲ್ಲ, ಮರ್ಯಾದೆಯ ಪದವೂ ಈ ಪಕ್ಷದ ನಿಘಂಟಿನಲ್ಲಿಲ್ಲ ಎಂದು ಸಿಪಿಎಂನ ಹಿರಿಯ ಮುಖಂಡ ಎನ್.ಎನ್.ಕೃಷ್ಣದಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಬೀಜದ ಗುಣ ಹತ್ತು ಗುಣಗಳು ಎಂದು ಹೇಳುತ್ತಿರುವಂತೆ ಪಕ್ಷದ ಪೂರ್ವಜರು ತೋರಿಸಿದ ಮಾರ್ಗಗಳು ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ‘ಕಡಕ್ಕುಪುರತ್’ ಶೈಲಿಗಳನ್ನು ಮಾದರಿಯಾಗಿಟ್ಟುಕೊಂಡು ನಾಯಕರು ಮತ್ತು ಪದಾಧಿಕಾರಿಗಳಿಂದ ಹೆಚ್ಚಿನ ಸೌಜನ್ಯವನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ ಎಂದು ಎನ್‍ಎನ್ ಕೃಷ್ಣದಾಸ್ ಅವರ ಅವಹೇಳನಕಾರಿ ಹೇಳಿಕೆ ಪ್ರತಿಪಾದಿಸುತ್ತದೆ.

ಸಿಪಿಎಂ ವಿರುದ್ಧ ಟೀಕೆ ಮಾಡಿ ದೂರು ನೀಡಿದ ಬಳಿಕ ಪಕ್ಷ ತೊರೆಯುವುದಾಗಿ ಘೋಷಿಸಿದ್ದ ಸ್ಥಳೀಯ ಸಮಿತಿ ಸದಸ್ಯ ಅಬ್ದುಲ್ ಶುಕೂರ್ ಅವರನ್ನು ಒಮ್ಮತದ ಚರ್ಚೆಯ ಮೂಲಕ ವಾಪಸ್ ಕರೆತಂದಾಗ ಕೃಷ್ಣದಾಸ್ ಅವರ ಅಸಹಿಷ್ಣುತೆ ತುಂಬಿದ ಮಾತುಗಳು ಕೇಳಿ ಬಂದವು. ಮಾಧ್ಯಮ ಕಾರ್ಯಕರ್ತರನ್ನು ‘ನಾಯಿಗಳು’ ಎಂದು ಸಂಬೋಧಿಸಿದ ಕೃಷ್ಣದಾಸ್, ವಿರೋಧ ವ್ಯಕ್ತಪಡಿಸಿದ ಮಾಧ್ಯಮದವರನ್ನು ಮತ್ತೊಮ್ಮೆ ಅದೇ ರೀತಿ ಕರೆದು ದಾಷ್ಟ್ರ್ಯ ಮೆರೆದರು. ಹಾಗೆ ಕರೆಯಬೇಡಿ ಎಂದು ಪತ್ರಕರ್ತರು ಒತ್ತಾಯಿಸಿದಾಗ ಕೃಷ್ಣದಾಸ್ ಹಾಗೆ ಕರೆಯುತ್ತೇನೆ ಎಂದು ಗದರಿದರು.

ಪಕ್ಷ ತೊರೆಯುವುದಾಗಿ ಶುಕೂರ್ ಘೋಷಿಸಿದ ಬೆನ್ನಲ್ಲೇ ಕೃಷ್ಣದಾಸ್ ಮನೆ ಮುಂದೆ ಜಮಾಯಿಸಿದ ಮಾಧ್ಯಮದವರ ದಂಡು ಆಕ್ರೋಶಕ್ಕೆ ಕಾರಣವಾಗಿತ್ತು. ಪಕ್ಷದಲ್ಲಿನ ಆಂತರಿಕ ಕಲಹ ಮತ್ತು ಆಕ್ರೋಶಗಳ ವರದಿಗೆ ಕೃಷ್ಣದಾಸ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಶುಕೂರ್ ಪಕ್ಷಕ್ಕೆ ಮರಳುವ ಕುರಿತು ಮಾಧ್ಯಮಗಳು ಶುಕೂರ್ ಪ್ರತಿಕ್ರಿಯೆ ಕೇಳಿದಾಗ ಶುಕೂರ್ ಬದಲಿಗೆ ಕೃಷ್ಣದಾಸ್ ಪ್ರತಿಕ್ರಿಯಿಸಿದ್ದಾರೆ. ಶುಕೂರ್ ಅವರಿಗೆ ಹೇಳಲು ಏನೂ ಇಲ್ಲ, ನಾನು ಶುಕೂರ್ ಪರ ಮಾತನಾಡುತ್ತಿದ್ದೇನೆ ಎಂದು ಸಿಪಿಎಂ ಮುಖಂಡ, ಮಾಧ್ಯಮ ಕಾರ್ಯಕರ್ತರು ಶುಕೂರ್ ಅವರ ಮನೆ ಮುಂದೆ ನಾಯಿಗಳು ಮಾಂಸದ ಅಂಗಡಿಯ ಮುಂದೆ ಕಾವಲು ಕಾಯುತ್ತಿರುವಂತೆ ಕಾಯುತ್ತಿದ್ದಾರೆ ಮತ್ತು ಅವರು ನಾಚಿಕೆಯಿಂದ ತಲೆಬಾಗಬೇಕು ಎಂದು ಹೇಳಿದರು.

ಶುಕೂರ್ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಿಪಿಎಂ ಮುಖಂಡ ಕೃಷ್ಣದಾಸ್ ಶುಕೂರ್ ಮನವೊಲಿಸಿ ಪಕ್ಷಕ್ಕೆ ವಾಪಸ್ ಕರೆತಂದರು. ಎಡಪಕ್ಷಗಳ ಸಮಾವೇಶದಲ್ಲಿ ಭಾಗವಹಿಸಲು ಎನ್.ಎನ್.ಕೃಷ್ಣದಾಸ್ ಅವರೊಂದಿಗೆ ಬರುತ್ತಿದ್ದರು. ಈ ವೇಳೆ ಮಾಧ್ಯಮದವರು  ಪ್ರತಿಕ್ರಿಯೆ ಕೇಳಿದಾಗ ಕೃಷ್ಣದಾಸರ ಅಹಂಕಾರದ ಮಾತುಗಳು ಹೊರಬಂದವು. ಪಾಲಕ್ಕಾಡ್ ಸಿಪಿಎಂನ ಜುಟ್ಟು ಮುಟ್ಟುವ ಸಾಮಥ್ರ್ಯ ಯಾರಿಗೂ ಇಲ್ಲ ಎಂದು ಎನ್.ಎನ್.ಕೃಷ್ಣದಾಸ್ ಹೇಳಿದ್ದಾರೆ.

ಕೃಷ್ಣದಾಸ್ ಅವರ ಅವಹೇಳನಕಾರಿ ಹೇಳಿಕೆಗೆ ಕೆಯುಡಬ್ಲ್ಯುಜೆ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries