HEALTH TIPS

ದೆಹಲಿ ಅಬಕಾರಿ ನೀತಿ ಹಗರಣ | ಆರೋಪಿಗಳಿಗೆ ದಾಖಲೆ ತಲುಪಿಸಿ: ಕೋರ್ಟ್‌

            ವದೆಹಲಿ: 'ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಚಾರ್ಚ್‌ಶೀಟ್‌ ಹಾಗೂ ಇತರ ಎಲ್ಲ ದಾಖಲೆಗಳ ಪ್ರತಿಗಳನ್ನು ಈ ಪ್ರಕರಣದ ಆರೋಪಿಗಳಿಗೆ ತಲುಪಿಸಿ' ಎಂದು ವಿಶೇಷ ನ್ಯಾಯಾಲಯ ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

         'ಮುಂದಿನ ವಿಚಾರಣೆ ನಡೆಯುವ ನವೆಂಬರ್‌ 4ರ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು' ಎಂದು ವಿಶೇಷ ನ್ಯಾಯಾಧೀಶೆ ಕಾವೇರಿ ಬವೆಜಾ ಅವರು ಸೂಚಿಸಿದರು.

            'ದಾಖಲೆಗಳ ಪರಿಶೀಲನೆಗೆ ತನಿಖಾ ಸಂಸ್ಥೆಯು ಗೊತ್ತು ಮಾಡಿರುವ ಸ್ಥಳವು ಸ್ವಚ್ಛತೆಯಿಂದ ಕೂಡಿಲ್ಲ. ಆ ಸ್ಥಳದ ಸಮೀಪದಲ್ಲಿ ಮಂಗಗಳ ವಾಸವಿದೆ. ಆ ಸ್ಥಳವು ಸುರಕ್ಷಿತವಾಗಿಯೂ ಇಲ್ಲ' ಎಂದು ಪ್ರತಿವಾದಿಗಳ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈ ಕಾರಣಕ್ಕಾಗಿ ನ್ಯಾಯಾಲಯವು ಈ ನಿರ್ದೇಶನ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries