ಮುಳ್ಳೇರಿಯ: ಗೃಹಿಣಿಗೆ ಲೈಂಗಿಕ, ದೈಹಿಕ, ಮಾನಸಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪತಿ ಹಾಗೂ ಅವರ ಮನೆಯವರ ವಿರುದ್ಧ ಅದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೃಹಿಣಿ ದೂರಿನ ಮೇರೆಗೆ ಕೇಸು ದಾಖಲಾಗಿದೆ.
ಯುವತಿ ವಿವಾಹ 2024 ಜೂನ್ 6ರಂದು ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಯುವಕನೊಂದಿಗೆ ನೆರವೇರಿದ್ದು, ಈ ಸಂದರ್ಭ ಹತ್ತು ಪವನು ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಪತಿಯೊಂದಿಗೆ ವಿಟ್ಲದಲ್ಲಿ ವಾಸಿಸುತ್ತಿರುವ ಮಧ್ಯೆ, ತನ್ನನ್ನು ಯಾರೊಂದಿಗೂ ಮಾತನಾಡಲು ಬಿಡದೆ, ಹೊರಕ್ಕೆ ತೆರಳದಂತೆ ಮನೆಯೊಳಗೆ ದಿಗ್ಬಂಧನ ವಿಧಿಸಲಾಗಿತ್ತು. ಲೈಂಗಿಕ ದೌರ್ಜನ್ಯ ನಡೆಸಿ, ದೈಹಿಕ ಹಿಂಸೆಯನ್ನೂ ನೀಡಲಾಗಿದೆ. ಮತ್ತಷ್ಟು ಚಿನ್ನ ಹಾಗೂ ಹಣ ತಂದು ಕೊಡುವಂತೆ ಬೇಡಿಕೆಯೊಡ್ಡಿ, ತನ್ನ ನಗ್ನ ಫೋಟೋ ತೆಗೆದು ಮೊಬೈಲಲ್ಲಿರಿಸಿಕೊಂಡಿದ್ದಾನೆ. ತನ್ನ ಎಲ್ಲಾ ಚಿನ್ನಾಭರಣವನ್ನು ಕಸಿದುಕೊಂಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಯುವತಿ ನೀಡಿದ ದಊರಿನನ್ವಯ ಪತಿ ಹಾಗೂ ಆತನ ತಾಯಿ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.