ತಿರುವನಂತಪುರಂ: 15ನೇ ಕೇರಳ ವಿಧಾನಸಭೆಯ ಹನ್ನೆರಡನೇ ಅಧಿವೇಶನ ಇದೇ ತಿಂಗಳ 4ರಂದು(ನಾಳೆ) ಆರಂಭವಾಗಲಿದೆ. ಈ ವೇಳೆ ವಿರೋಧ ಪಕ್ಷದ ಸದಸ್ಯರು ನೀಡಿದ ನಕ್ಷತ್ರ ಹಾಕಿದ ಪ್ರಶ್ನೆ ನೋಟಿಸ್ ಗಳನ್ನು ನಕ್ಷತ್ರರಹಿತ ಪ್ರಶ್ನೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಸಭಾಧ್ಯಕ್ಷರಿಗೆ ಪತ್ರ ನೀಡಿದ್ದರು.
ನಕ್ಷತ್ರ ಹಾಕಿದ ಪ್ರಶ್ನೆಗಳಾಗಿ ಹೊರಡಿಸಲಾದ 49 ನೋಟೀಸ್ಗಳನ್ನು ನಕ್ಷತ್ರರಹಿತ ಪ್ರಶ್ನೆಗಳಾಗಿ ಬದಲಾಯಿಸಲಾಗಿದೆ ಎಂದು ಪ್ರತಿಪಕ್ಷವು ಆರೋಪಿಸಿದೆ. ಇದನ್ನು ಸ್ಪೀಕರ್ ಅವರ ಸೂಚನೆ ಹಾಗೂ ಹಿಂದಿನ ತೀರ್ಪಿಗೆ ವಿರುದ್ಧವಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕಾಫಿರ್ ಸ್ಕ್ರೀನ್ ಶಾಟ್ ವಿವಾದ, ಎಡಿಜಿಪಿ ವಿಚಾರ ಸೇರಿದಂತೆ ಪ್ರಶ್ನೆಗಳಿಂದ ನಕ್ಷತ್ರ ಚಿಹ್ನೆಯನ್ನು ಹೊರಗಿಡಲಾಗಿದೆ.
ಈ ಪ್ರಶ್ನೆ ನೋಟಿಸ್ಗಳನ್ನು ನಕ್ಷತ್ರರಹಿತ ಪ್ರಶ್ನೆಗಳನ್ನಾಗಿ ಪರಿವರ್ತಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಗಳನ್ನು ನಕ್ಷತ್ರ ಹಾಕಿದ ಪ್ರಶ್ನೆಗಳಾಗಿ ಅನುಮತಿಸಬೇಕು ಎಂದು ಸತೀಶನ್ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ನೇರವಾಗಿ ಪ್ರಶ್ನೆ ಕೇಳಲು ಮತ್ತು ಸಚಿವರಿಂದ ನೇರ ಉತ್ತರ ಪಡೆಯಲು ಪ್ರಾಮುಖ್ಯತೆಯ ಕ್ರಮದಲ್ಲಿ ನಕ್ಷತ್ರ ಚಿಹ್ನೆಗಳನ್ನು ನೀಡಲಾಗುತ್ತದೆ. ಅಸೆಂಬ್ಲಿಯಲ್ಲಿ ನಕ್ಷತ್ರ ಚಿಹ್ನೆಯಿಂದ ಗುರುತಿಸದ ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲ. ಬದಲಿಗೆ ಲಿಖಿತ ಉತ್ತರ ನೀಡಲಾಗುವುದು ವಾಡಿಕೆ.