ಕೊಚ್ಚಿ: ಮುಂಡಕೈ-ಚುರಲ್ಮಲಾ ಭೂಕುಸಿತ ದುರಂತದ ಅಂಕಿಅಂಶಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ವಿಭಾಗೀಯ ಪೀಠ ಈ ನಿರ್ದೇಶನವನ್ನು ಇಂದು ನೀಡಿದೆ.
ಶವ ಸಂಸ್ಕಾರಕ್ಕೆ ಭೂಮಿ ಸ್ವಾಧೀನಕ್ಕೆ ತಗಲಿದ ವೆಚ್ಚವನ್ನು ಸರ್ಕಾರ ತಿಳಿಸಬೇಕು. ಕೇರಳಕ್ಕೆ ಪರಿಹಾರ ನೆರವು ನೀಡುವ ಬಗ್ಗೆ ಕೇಂದ್ರವು ತನ್ನ ನಿಲುವನ್ನು ತಿಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮೂರು ವಾರಗಳಲ್ಲಿ ನಿಲುವು ತಿಳಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೂ ಸೂಚಿಸಲಾಗಿದೆ.