ಕುಂಬಳೆ: ಕ.ಸಾ.ಪ.ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷೆ, ಕನ್ನಡ ಹೋರಾಟಗಾರ್ತಿ, ವೈದ್ಯೆ ದಿ.ಡಾ.ಲಲಿತಾ ಎಸ್.ಎನ್.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ನಾಳೆ(ಅ.21) ಸೀತಾಂಗೋಳಿಯಲ್ಲಿರುವ ನ್ಯಾಯವಾದಿ ಥೋಮಸ್ ಡಿ’ಸೋಜಾ ಅವರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.
ಕ.ಸಾ.ಪ.ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರ್ ಅಧ್ಯಕ್ಷತೆ ವಹಿಸುವರು.ಹಿರಿಯ ಸಾಹಿತಿ ಬಾಲ ಮಧುರಕಾನನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ನ್ಯಾಯವಾದಿ.ಥೋಮಸ್ ಡಿ’ಸೋಜ ಸಂಸ್ಮರಣಾ ಭಾಷಣ ಮಾಡುವರು.ಕಸಾಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ, ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ನೇತೃತ್ವ ವಹಿಸುವರು.