HEALTH TIPS

ಬಿಎಂಎಸ್ ಸಂಸ್ಥಾಪಕ ದತ್ತೋಪಂತ್ ಠೇಂಗಡಿ ಸಂಸ್ಮರಣೆ, ಭಾರತೀಯ ಮಜ್ದೂರ್ ಸಂಗಮ

ಕಾಸರಗೋಡು: ದೇಶದ ದುಡಿಯುವ ಸಮುದಾಯದ ಸವಾರ್ಂಗೀಣ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಕರ್ಮಯೋಗಿ, ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪಕ ಸ್ವರ್ಗೀಯ ದತ್ತೋಪಂತ್ ಠೇಂಗಡಿ ಅವರು ಆದರ್ಶ ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ  ಎಂದು ಬಿಎಂಎಸ್ ಅಖಿಲ ಭಾರತ ಕಾರ್ಯದರ್ಶಿ ವಿ.ರಾಧಾಕೃಷ್ಣನ್ ಹೇಳಿದರು.

ಅವರು ಕಾಸರಗೋಡು ನಗರಸಭಾ ಸಮ್ಮೇಳನ ಸಭಾಂಗಣದಲ್ಲಿ ನಡೆದ ದತ್ತೋಪಂತ್ ಠೇಂಗಡಿ ಸಂಸ್ಮರಣೆ ಹಾಗೂ ಭಾರತೀಯ ಮಜ್ದೂರ್ ಸಂಗಮ ಉದ್ಘಾಟಿಸಿ ಮಾತನಾಡಿದರು. ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಉಪೇಂದ್ರನ್ ಅಧ್ಯಕ್ಷತೆ ವಹಿಸಿದ್ದರು.  

ಬಿಎಂಎಸ್‍ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಅವರು ಸಂಗಟನೆಯ 70ನೇ ವರ್ಷದ ಭವಿಷ್ಯದ ಕಾರ್ಯಕ್ರಮಗಳನ್ನು ನಿರೂಪಿಸಿದರು. ಜಿಲ್ಲಾ ಪದಾಧಿಕಾರಿಗಳಾದ ಅನಿಲ್.ಬಿ.ನಾಯರ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್, ಸಿಂಧು ಮಾಯಿಪ್ಪಾಡಿ, ಯಶವಂತಿ, ಲೀಲಾಕೃಷ್ಣನ್, ಗುರುದಾಸ್ ಮಧೂರು, ಸುರೇಶ್ ದೇಳಿ, ಸುನಿಲ್ ವಾಯಕೋಡ್, ಅನೂಪ್ ಕೋಳಿಚ್ಚಲ್, ಟಿ.ಎಂ.ಕೆ.ರಾಘವನ್ ಉಪಸ್ಥಿತರಿದ್ದರು. ಸಂಘಟನೆ ರಾಜ್ಯ ಸಮಿತಿ ಸದಸ್ಯ ವಿ.ವಿ.ಬಾಲಕೃಷ್ಣನ್ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಜತೆ ಕಾರ್ಯದರ್ಶಿ ಪಿ.ದಿನೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಭರತನ್ ಕಲ್ಯಾಣ್ ರೋಡ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries