HEALTH TIPS

ನೈತಿಕ ಪೊಲೀಸ್‍ಗಿರಿ-ಕಾಸರಗೋಡು ನಿವಾಸಿಯ ದರೋಡೆಗೈದ ಏಳು ಮಂದಿಯ ಬಂಧನ

ಕಾಸರಗೋಡು: ನೈತಿಕ ಪೊಲೀಸ್‍ಗಿರಿ ಮೂಲಕ ಕಾಸರಗೋಡು ನಿವಾಸಿ ರಾಬಿನ್ ಥಾಮಸ್ ಎಂಬವರ ಮೇಲೆ ಹಲ್ಲೆ ನಡೆಸಿ, 500ರೂ. ಕಸಿದು ಅವರು ಸಂಚರಿಸುತ್ತಿದ್ದ ಬೈಕ್‍ಗೆ ಹಾನಿಯೆಸಗಿದ ಏಳು ಮಂದಿ ಆರೋಪಿಗಳನ್ನು ಕಣ್ಣೂರು ಧರ್ಮಡಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಂ. ತಸ್ಮೀರ್, ಕೆ.ಕೆ ಅಪ್‍ನಾಸ್, ಟಿ.ಕೆ ಶಾನಿರ್, ಕೆ.ಕೆ ಮಹಮ್ಮದ್ ಅಫ್ಸರ್, ಕೆ. ಶಬೀರ್, ಎ. ಮಹಮ್ಮದ್ ಅಸ್ಗರ್ ಹಾಗೂ ಅಹಮ್ಮದ್ ನಿಸಾರ್ ಬಂಧಿತರು.

ಅ. 12ರಂದು ತನ್ನ ಸ್ನೇಹಿತನ ಮನೆಗೆ ಬೈಕಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪೊಲೀಸರೆಂದು ತಿಳಿಸಿ ಆಗಮಿಸಿದ ತಂಡ ಹಾದಿ ಮಧ್ಯೆ ತಡೆದು, ಬೈಕಿಗೆ ಹಾನಿಗೈದು, 500ರೂ. ನಗದು ದೋಚಿರುವುದಾಗಿ ರಾಬಿನ್ ಥಾಮಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries