HEALTH TIPS

ಸಿಪಿಎಂ ತೊರೆಯದೆ ಮರಳಿ ಸೇರ್ಪಡೆಗೊಂಡ ಅಬ್ದುಲ್ ಶುಕೂರ್: ಮನವೊಲಿಕೆ ಯಶಸ್ವಿ

ಪಾಲಕ್ಕಾಡ್: ಸಿಪಿಎಂ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಸಿಪಿಎಂನ ಪಾಲಕ್ಕಾಡ್ ಪ್ರದೇಶ ಸಮಿತಿ ಸದಸ್ಯ ಅಬ್ದುಲ್ ಶುಕೂರ್ ಅವರನ್ನು ಪಕ್ಷ ಮನವೊಲಿಸಿ ಮರಳಿ ಕರೆಸಿದೆ.

ಅಬ್ದುಲ್ ಶುಕೂರ್ ಅವರೊಂದಿಗೆ ಮಾತನಾಡಿ ಮನವೊಲಿಸಿದ ಬಳಿಕ ಪಕ್ಷ ತೊರೆಯುವ ನಿರ್ಧಾರ ಹಿಂಪಡೆದರು ಎಮದು ತಿಳಿದುಬಂದಿದೆ.

ಅಬ್ದುಲ್ ಶುಕೂರ್ ಪಕ್ಷ ತೊರೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ರಾಜ್ಯ ಸಮಿತಿ ಸದಸ್ಯ ಎನ್.ಎನ್.ಕೃಷ್ಣದಾಸ್ ಅವರನ್ನು ನೇಮಿಸಲಾಗಿತ್ತು.

ಎಲ್ ಡಿಎಫ್ ಅಭ್ಯರ್ಥಿ ಪಿ.ಸಾರ್ ಅವರ ಚುನಾವಣಾ ಸಮಾವೇಶದಲ್ಲಿ ಅಬ್ದುಲ್ ಶುಕೂರ್ ಭಾಗವಹಿಸಲಿದ್ದಾರೆ ಎಂದು ಸಿಪಿಎಂ ಜಿಲ್ಲಾ ನಾಯಕತ್ವ ಮಾಹಿತಿ ನೀಡಿದೆ.

ಪಾಲಕ್ಕಾಡ್ ಆಟೋ ಟ್ಯಾಕ್ಸಿ ಯೂನಿಯನ್‍ನ ಅಬ್ದುಲ್ ಶುಕೂರ್ ಜಿಲ್ಲಾ ಖಜಾಂಚಿ. ಅವರು ಮಾಜಿ ನಗರÀಸಭೆ ಸದಸ್ಯರೂ ಆಗಿದ್ದರು.

ಇದಕ್ಕೆ ಪ್ರತಿಯಾಗಿ ಸಿಪಿಎಂ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಶುಕೂರ್ ರಾಜೀನಾಮೆ ಘೋಷಿಸಿದ್ದಾರೆ. ನಂತರ ಅವರನ್ನು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಬರಮಾಡಿಕೊಂಡಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries