HEALTH TIPS

ಉದ್ಯೋಗ ಭರವಸೆಯೊಂದಿಗೆ ವಂಚನೆ-ಸಚಿತಾ ರೈ ವಿರುದ್ಧ ಹತ್ತು ಕೇಸು ದಾಖಲು

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‍ಪಿ ಶಾಲಾ ಶಿಕ್ಷಕಿ ಸಚಿತಾ ರೈ (27) ವಿರುದ್ಧ ಮತ್ತಷ್ಟು ಕೇಸು ದಾಖಲಾಗುತ್ತಿದ್ದು, ಒಟ್ಟು ದೂರುಗಳ ಸಂಖ್ಯೆ ಹತ್ತಕ್ಕೇರಿದೆ.

ಗೋಸಾಡ ನಿವಾಸಿ ರಕ್ಷಿತಾ ಹಾಗೂ ಉಕ್ಕಿನಡ್ಕ ಸನಿಹದ ಕಂಗಿಲ ನಿವಾಸಿ ಸುಚಿತ್ರಾ ಎಂಬವರ ದೂರಿನ ಮೇರೆಗೆ ಬದಿಯಡ್ಕ ಠಾಣೆ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ.

ರಕ್ಷಿತಾ ಅವರಿಂದ 5 ಲಕ್ಷ ಹಾಗೂ ಸುಚಿತ್ರಾ ಅವರಿಂದ 50 ಸಾವಿರ ರೂ. ಪಡೆದು ವಂಚಿಸಿರುವ ಬಗ್ಗೆ ಈ ದೂರು.  ಪೆರುಂಬಳ ವಯಲಂಕುಂಜಿ ಕಿಯಕ್ಕೆವೀಟಿಲ್ ನಿವಾಸಿ  ಧನಿಷ್ಮಾ ನೀಡಿದ ದೂರಿನ ಮೇರೆಗೆ ಮೇಲ್ಪರಂಬ ಠಾಣೆ ಪೆÇಲೀಸರು ಸಚಿತಾರೈ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗದ ಭರವಸೆ ನೀಡಿ, ಸಚಿತಾ ರೈ ಏಳು ಲಕ್ಷ ರೂ. ಪಡೆದುಕೊಂಡಿದ್ದು, ಕೆಲಸ ನೀಡದೆ, ಹಣವನ್ನೂ ವಾಪಾಸು ಮಾಡದೆ ವಂಚಿಸಿರುವುದಾಗಿ ಧನಿಷ್ಮಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಚಿತಾ ರೈ ವಿರುದ್ಧ ಕುಂಬಳೆ, ಮಂಜೇಶ್ವರಂ, ಬದಿಯಡ್ಕ ಮತ್ತು ಉಪ್ಪಿನಂಗಡಿ ಪೆÇಲೀಸ್ ಠಾಣೆಗಳಲ್ಲಿ ಈಗಾಗಲೇ ಏಳು ಪ್ರಕರಣ ದಾಖಲಾಗಿದೆ.   ಕಿದೂರು ಪಡಿಕಲ್ಲು ನಿವಾಸಿ ನಿಶ್ಮಿತಾ ಶೆಟ್ಟಿ ಅವರಿಗೆ ಕಾಸರಗೋಡು ಸಿಪಿಸಿಆರ್‍ಐನಲ್ಲಿ ಕೆಲಸದ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿತಾ ರೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ತಿರಸ್ಕರಿಸಿದೆ.

ಜಾಮೀನು ಅರ್ಜಿ ತಿರಸ್ಕøತಗೊಂಡಿದ್ದರೂ, ಇದುವರೆಗೆ ಈಕೆಯನ್ನು ಬಂಧಿಸದಿರುವುದರ ವಿರುದ್ಧ ಪ್ರತಿಪಕ್ಷಗಳು ಧ್ವನಿಯೆತ್ತಲಾರಂಭಿಸಿದೆ. ಸಚಿತಾ ರೈ ಹೆರಿಗೆ ರಜೆ ಪಡೆದು ಕೋಯಿಕ್ಕೋಡ್‍ನಲ್ಲಿರುವ ಪತಿ ಮನೆಯಲ್ಲಿರುವುದಾಗಿ ಪೆÇಲೀಸರಿಗೆ ಮಾಹಿತಿ ಲಭಿಸಿದೆ. ಇನ್ನೊಂದೆಡೆ ಕರ್ನಾಟಕ ಪೆÇಲೀಸರು ಸಚಿತಾ ರೈಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries