HEALTH TIPS

ಬಿ.ಎಸ್.ಎಫ್. ಮುಖ್ಯಸ್ಥ ಸ್ಥಾನದಿಂದ ವಜಾಗೊಂಡ ನಿತಿನ್ ಅಗರ್ವಾಲ್ ರಸ್ತೆ ಸುರಕ್ಷತಾ ಆಯುಕ್ತರಾಗಿ ನೇಮಕ

ತಿರುವನಂತಪುರಂ: ರಾಜ್ಯ ಗೃಹ ಇಲಾಖೆಯು ಡಿಜಿಪಿ ನಿತಿನ್ ಅಗರ್ವಾಲ್ ಅವರನ್ನು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ನೇಮಿಸಿದೆ, ಅವರನ್ನು ಕೇಂದ್ರ ಸರ್ಕಾರವು ಬಿ.ಎಸ್.ಎಫ್ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕಿತ್ತು. 

ಭಯೋತ್ಪಾದಕರು ಪಾಕಿಸ್ತಾನದಿಂದ ಕಾಶ್ಮೀರಕ್ಕೆ ನುಸುಳಿ ದೊಡ್ಡ ಪ್ರಮಾಣದ ದಾಳಿ ನಡೆಸಿದ ನಂತರ ಕೇಂದ್ರ ಸರ್ಕಾರ ಬಿಎಸ್ಎಫ್ ಮುಖ್ಯಸ್ಥ ನಿತಿನ್ ಅಗರ್ವಾಲ್ ಅವರನ್ನು ಸ್ಥಾನದಿಂದ ವಜಾಗೊಳಿಸಿತ್ತು. 

ನಿತಿನ್ ಅಗರ್ವಾಲ್ ಅವರು ತಮ್ಮ ಸೇವೆಯನ್ನು ಪೂರ್ಣಗೊಳಿಸಲು ಎರಡು ವರ್ಷಗಳು ಇದ್ದ ಕಾರಣ ಅವರಿಗೆ ವಿನಾಯಿತಿ ನೀಡಲಾಗಿದೆ. ಈ ಹಿಂದೆ ನಿತಿನ್ ಅಗರ್ವಾಲ್ ರಾಜ್ಯ ಪೋಲೀಸ್ ಮುಖ್ಯಸ್ಥರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಶೇಖ್ ದರ್ವೇಜ್ ಸಾಹಿಬ್ ಅವರು ಅಗರ್ವಾಲ್ ಕೇರಳ ಕೇಡರ್‍ನಲ್ಲಿಲ್ಲ ಎಂದು ಘೋಸಿಸಿದಾಗ ರಾಜ್ಯ ಪೋಲೀಸ್ ಮುಖ್ಯಸ್ಥರಾದರು.

ಬಿಎಸ್‍ಎಫ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಜೆಯ ಮೇಲಿದ್ದ ನಿತಿನ್ ಅಗರ್ವಾಲ್ ಕೇರಳ ಕೇಡರ್‍ಗೆ ವಾಪಸಾದರು, ಆದರೆ ನೇಮಕಾತಿ ಆದೇಶ ದಿನಗಟ್ಟಲೆ ಕೈಸೇರಿರಲಿಲ್ಲ. ಕೇಂದ್ರವು ರಾಜ್ಯಕ್ಕೆ ನಾಲ್ಕು ಡಿಜಿಪಿ ಹುದ್ದೆಗಳನ್ನು ಹಂಚಿಕೆ ಮಾಡಿದೆ. ಸದ್ಯ ರಾಜ್ಯದಲ್ಲಿ ನಾಲ್ವರು ಡಿಜಿಪಿಗಳಿದ್ದಾರೆ. ಐದನೇ ಡಿಜಿಪಿ ನೇಮಕ ಸವಾಲಾಗಿದ್ದರಿಂದ ಕೇಂದ್ರಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಆರು ತಿಂಗಳ ಕಾಲ ಐದನೇ ಡಿಜಿಪಿ ಹುದ್ದೆಗೆ ಕೇಂದ್ರ ಅನುಮತಿ ನೀಡಿದ್ದು, ನಿತಿನ್ ಅಗರ್ವಾಲ್ ನೇಮಕಕ್ಕೆ ತೆರೆಬಿದ್ದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries