ಮುಳ್ಳೇರಿಯ: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಮಾಧವ ತೆಕ್ಕೆಕೆರೆ ಅವರು ಬರೆದ 'ರೇಡಿಯೋ ದಾಟ್ ಡಿಸ್ಪೈಡ್ ಪಿಕ್ಚರ್ಸ್' ಕಿರು ಕಾದಂಬರಿ ಕೃತಿಯನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಇಂಗ್ಲಿಷ್ ವಿಭಾಗದ ನಿವೃತ್ತ ಮುಖ್ಯಸ್ಥ, ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕøತರಾದ ಪ್ರೊ. ಶ್ರೀಶ ದೇವಪೂಜಿತ್ತಾಯರು ಬಿಡುಗಡೆಗೊಳಿಸಿದರು.
ಕೃತಿಯ ಮೊದಲ ಪ್ರತಿಯನ್ನು ಇರಿಯಣ್ಣಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಸಲಾಂ ಎಂ ಎ ಸ್ವೀಕರಿಸಿದರು. ಸೆಂಟ್ರಲ್ ಎಕ್ಸೈಸ್ ನಿವೃತ್ತ ಕಮಿಷನರ್ ಆಚಾರ್ಯ ಡಾ. ಕೆ ಕೆ ಸುಬ್ರಹ್ಮಣ್ಯಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿನೆಮಾ ನಿರ್ಮಾಪಕ ಭರತ್ ರಾಜ್ ಉಳಿಯತ್ತಡ್ಕ, ಮುಳ್ಳೇರಿಯ ಸರ್ಕಾರಿ ಶಾಲಾ ಶಿಕ್ಷಕಿ ರೆಜಿತಾ ಮಾಧವ್, ಸಾಹಿತಿ ಲಕ್ಷ್ಮಣ ಶಾಸ್ತಾಂಗೋಡು, ನಿವೃತ್ತ ಶಿಕ್ಷಕಿ ಡಾ. ಗಂಗಾದೇವಿ ಶುಭ ಹಾರೈಸಿದರು. ಈ ಕೃತಿಯ ಮುಖಪುಟವನ್ನು ಚಿತ್ರ ಕಲಾವಿದರಾದ ಹರೀಶ ಚೆನ್ನಂಗೋಡು ಮತ್ತು ರೂಪಲ್ ಸಪ್ತತಿ ರಚಿಸಿದ್ದಾರೆ. ಈ ಕೃತಿಯ ರಚನೆಗೆ ಸಂಪನ್ಮೂಲ ವ್ಯಕ್ತಿಗಳಾದ ವಿಶ್ವನಾಥ ಭಟ್, ಗೀತಾ ಬಾಯಿ ಮೊದಲಾದವರು ನಿರ್ದೇಶಿಸಿದ್ದರು. ಪರವನಡ್ಕ ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್ ಫೈಸಲ್ ಸ್ವಾಗತಿಸಿ,.ಕೃತಿಕಾರ ಮಾಧವ ತೆಕ್ಕೆಕೆರೆ ವಂದಿಸಿದರು.