HEALTH TIPS

ಶೇಣಿ ಶಾಲಾ ವಿದ್ಯಾರ್ಥಿಗೆ ರಾಜ್ಯ ಮಟ್ಟದ ಕಬ್ಬಡಿಯಲ್ಲಿ ಚಿನ್ನದ ಪದಕ-ವಿವಿಧ ವಿಭಾಗ ವಿಜೇತರಿಗೆ ಅಭಿನಂದನೆ

ಪೆರ್ಲ: ರಾಜ್ಯ ಮಟ್ಟದ ಕಬ್ಬಡಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಶೇಣಿ ಶ್ರೀಶಾರದಾಂಬ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಅಭಿನವ್ ಹಾಗೂ ಜಿಲ್ಲಾ ಮಟ್ಟ ಹಾಗೂ ರಾಜ್ಯ  ಮಟ್ಟದ ಕ್ರೀಡಾ ಮೇಳದ  ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಜ್ಯೂನಿಯರ್ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ ಅನುದೀಪ್ ಎಸ್.ಆರ್, ಅನಿರುದ್ಧ್ ಎಸ್,  ಶಶಾಂಕ್ ಪಿ, ಸಬ್ ಜ್ಯೂನಿಯರ್ ಕಬ್ಬಡಿಪಟುಗಳಾದ ಭರತ್ ,ತೇಜಸ್ ಕೆ, ಪವನ್ ಬಿ, ದಿವಾಕರ ಜೆ.ಪಿ, ಶ್ರೇಯಸ್ ರೈ ಹಾಗೂ ಶಾಲಾ ದೈಹಿಕ ಶಿಕ್ಷಕ ಸೃಜನ್ ರೈ, ತರಬೇತುದಾರ ವಂದಿತ್ ಶೆಟ್ಟಿ ಬಂಬ್ರಾಣ ಅವರನ್ನು ಅಭಿನಂದಿಸಲಾಯಿತು.

ಎಣ್ಮಕಜೆ ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ, ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಾಸ್ತಾ ಕುಮಾರ್, ಶಾಲಾ ಆಡಳಿತ ಮಂಡಳಿಯ ಶಾರದಾ ವೈ, ಹಿರಿಯ ಪ್ರಾಥಮಿಕ ಶಾಲಾ ಹಿರಿಯ ಶಿಕ್ಷಕಿ ಹೈಮಾವತಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಎಂ.ಪಿ ಸ್ವಾಗತಿಸಿ, ಶಿಕ್ಷಕಿ ದಿವ್ಯಾ ಆಳ್ವ ವಂದಿಸಿದರು. ಬಳಿಕ ಬ್ಯಾಂಡ್ ವಾದ್ಯಗಳೊಂದಿಗೆ ಶಾಲೆಯಿಂದ ಹೊರಟು ಪೇಟೆಯಲ್ಲಾಗಿ ಮೆರವಣಿಗೆ ನಡೆಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries