HEALTH TIPS

ಆರ್‌ಎಸ್‌ಎಸ್‌ ಕಾರ್ಯಚಟುವಟಿಕೆಗಳ ಕುರಿತು ವಿಮರ್ಶೆ

         ವದೆಹಲಿ: ಮಥುರಾದಲ್ಲಿ ಈ ವಾರಾಂತ್ಯಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿಮರ್ಶೆ ನಡೆಸಲು ನಿರ್ಧರಿಸಲಾಗಿದೆ.  2025ಕ್ಕೆ ಆರ್‌ಎಸ್‌ಎಸ್‌ ನೂರು ವರ್ಷ ಪೂರೈಸಲಿದೆ.

          ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಂದು ನಡೆಯುವ ಕಾರ್ಯಕ್ರಮದ ರೂಪುರೇಷೆಯನ್ನು ಸಂಘವು ಸಭೆಯಲ್ಲಿ ನಿರ್ಧರಿಸಲಿದೆ.

            ಈ ಬಗ್ಗೆ ಆರ್‌ಎಸ್‌ಎಸ್‌ನ ಮಾಧ್ಯಮ ಘಟಕದ ಮುಖ್ಯಸ್ಥ ಸುನಿಲ್‌ ಅಂಬೇಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. 'ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದು, ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತ ಯೋಜನೆ ರೂಪಿಸಲಾಗಿದ್ದು, ಈ ಕುರಿತು ವಿಮರ್ಶೆ ನಡೆಸಲಾಗುವುದು' ಎಂದು ಸುನಿಲ್‌ ಮಾಹಿತಿ ನೀಡಿದರು.

             '1925ರಲ್ಲಿ ಆರಂಭಗೊಂಡ ಆರ್‌ಎಸ್‌ಎಸ್‌, 'ವ್ಯಕ್ತಿ ನಿರ್ಮಾಣ'ದಿಂದ ಹಿಡಿದು 'ರಾಷ್ಟ್ರ ನಿರ್ಮಾಣ'ದ ವರೆಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ಕೆ 2025ರಲ್ಲಿ ನೂರು ವರ್ಷ ತುಂಬಲಿದ್ದು, ಪ್ರಸ್ತುತ ಆರ್‌ಎಸ್‌ಎಸ್‌ ತನ್ನ ಕಾರ್ಯವ್ಯಾಪ್ತಿಯನ್ನು ಇಡೀ ರಾಷ್ಟ್ರಕ್ಕೇ ವಿಸ್ತರಿಸಿಕೊಂಡಿದೆ' ಎಂದರು.

         'ಸ್ವಾಮಿ ದಯಾನಂದ ಸರಸ್ವತಿ, ಭಗವಾನ್‌ ಬಿರ್ಸಾ ಮುಂಡಾ, ಅಹಿಲ್ಯಾಭಾಯಿ ಹೋಲ್ಕರ್‌, ರಾಣಿ ದುರ್ಗಾವತಿ ಹಾಗೂ ಸಂತ ಅನುಕುಲ್‌ ಚಂದ್ರ ಠಾಕೂರ್‌- ಈ ಐವರು ಸಂತರ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವುದು ಹೇಗೆ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು' ಎಂದು ವಿವರಿಸಿದರು.

            ' ಆರ್‌ಎಸ್‌ಎಸ್‌ನಲ್ಲಿ ಮೂರು ವರ್ಷ ಪೂರೈಸಿದ 40 ವರ್ಷ ಮೇಲ್ಪಟ್ಟ ಕಾರ್ಯಕರ್ತರಿಗೆ ಇದೇ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries