ಕಾಸರಗೋಡು: 37ನೇ ಕಾಸರಗೋಡು ಐಕ್ಷಣಿಕ ಉಪಜಿಲ್ಲ ಶಾಲಾ ವಿಜ್ಞಾನ, ಸಮಾಜಶಾಸ್ತ್ರ, ಗಣಿತ, ವೃತ್ತಿಪರಿಚಯ ಮತ್ತು ಐಟಿ ಮೇಳವು ಅಕ್ಟೋಬರ್ 15 ರಿಂದ 17 ರವರೆಗೆ ತಳಂಗರೆ ಸರ್ಕಾರಿ ಮುಸ್ಲಿಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಹಾಗೂ ದಖೀರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯದೆ ಎಂದು ಉಪಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್ ಮೊಂತೆರೊ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಉಪಜಿಲ್ಲೆಯ 135 ಶಾಲೆಗಳ ಸುಮಾರು 5000 ಪ್ರತಿಭಾವಂತರು ಭಾಗವಹಿಸಲಿದ್ದಾರೆ. 14ರಂದು ವಿಜ್ಞಾನೋತ್ಸವದ ಶಾಲಾ ದಾಖಲಾತಿ ಹಾಗೂ 15ರಂದು ವಿಜ್ಞಾನ ನಾಟಕ ಸ್ಪರ್ಧೆ ನಡೆಯಲಿದೆ. 16ರಂದು ಬೆಳಗ್ಗೆ 10ಕ್ಕೆ ಕಸರಗೋಡು ಶಾಸಕ ಎನ್ಎ ನೆಲ್ಲಿಕುನ್ನು ಮೇಳದ ಔಪಚಾರಿಕ ಉದ್ಘಾಟನೆ ನೆರವೇರಿಸುವರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸುವರು. ಸಮಾರಂಬದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್ ವಿದ್ಯಾರ್ಥಿ ಕಲ್ಯಾಣ ಪ್ರಾಧ್ಯಾಪಕ ರಾಜೇಂದ್ರ ಪಿಲಾಂಗಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜನಪ್ರತಿನಿಧಿಗಳು, ಪೌರಕಾರ್ಮಿಕರು, ಶಿಕ್ಷಣಾಧಿಕಾರಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
17ರಂದು ಸಂಜೆ 4 ಗಂಟೆಗೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರೋಪ ಸಮಾರಂಭ ಉದ್ಘಾಟಿಸುವರು. ಪ್ರಧಾನ ಸಂಚಾಲಕ ವಿ. ನಾರಾಯಣನ್ ಕುಟ್ಟಿ, ಮುಖ್ಯಶಿಕ್ಷಕಿ ಬಿಂದು ಪಿ.ಡಿ., ತಾ.ಪಂ ಅಧ್ಯಕ್ಷ ನೌಫಲ್ ತಾಯಲ್, ಪ್ರಚಾರ ವಿಭಾಗದ ಅಧ್ಯಕ್ಷ ಅಧ್ಯಕ್ಷ ಟಿ.ಎ.ಶಾಫಿ, ಸಂಚಾಲಕ ಸತ್ತಾರ್ ಆತವನಾಡ್ ಉಪಸ್ಥಿತರಿದ್ದರು.