HEALTH TIPS

ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ 'ತೆಂಕಬೈಲು ಸ್ಮøತಿ ಭವನ'ದ ಉದ್ಘಾಟನೆ, ಶಾರದಾಮಹೋತ್ಸವ, ಯಕ್ಷಗಾನ ಬಯಲಾಟ

ಪೆರ್ಲ: ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾಗಿರುವ 'ತೆಂಕಬೈಲು ಸ್ಮøತಿ ಭವನ'ದ ಉದ್ಘಾಟನಾ ಸಮಾರಂಭ ಅ. 11ರಂದು ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸ್ಮøತಿಭವನ ಲೋಕಾರ್ಪಣೆಗೈಯಲಿರುವುದಾಗಿ ಕೇಂದ್ರದ ಸಂಚಲಕ ಹಾಗೂ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಅವರು ಪೆರ್ಲದ ಕೇಂದ್ರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೆಂಕು ತಿಟ್ಟಿನ ಯಕ್ಷಗಾನವನ್ನು ಶಾಸ್ತ್ರೀಯ ರೀತಿಯಲ್ಲಿ ಕಲಿಸಿಕೊಡುವ ಏಕ್ಯಕ ಕೇಂದ್ರ ಇದಾಗಿದ್ದು, 2025ರ ವೇಳೆಗೆ ಸಂಸ್ಥೆ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳಲಿದೆ.  ಹನ್ನೊಂದು ವಿದ್ಯಾರ್ಥಿಗಳಿಂದ ಆರಂಭಗೊಂಡ ಕೇಂದ್ರದಲ್ಲಿ ಇಂದು 150ರಷ್ಟು ಯಕ್ಷಗಾನ ನಾಟ್ಯ ಕಲಿಕಾ ವಿದ್ಯಾರ್ಥಿಗಳಿದ್ದಾರೆ. ಯಕ್ಷಗಾನ ನಾಟ್ಯದ ಜತೆಗೆ ಹಿಮ್ಮೇಳ ತರಗತಿಯೂ ನಡೆದುಬರುತ್ತಿದ್ದು,Éಂಟು ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರ ಹೆಸರಿನ ಸ್ಮøತಿಭವನ ನಿರ್ಮಿಸಲಾಗಿದೆ.

11ರಂದು ಬೆಳಗ್ಗೆ ಬೆಳಗ್ಗೆ ಶಾರದಾ ಪ್ರತಿಷ್ಟೆ, 9.30ಕ್ಕೆ ಭಜನೆ ಹಾಗೂ 10.30ಕ್ಕೆ  ಸ್ಮ್ರತಿಭವನದ ಉದ್ಘಾಟನೆ ನಡೆಯಲಿದೆ.  ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸುವರು. ತೆಂಕು ತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಹಿರಿಯ ವಕೀಲ ಎಂ. ನಾರಾಯಣ ಭಟ್, ಶ್ರೀ ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಬೈರಿಕಟ್ಟೆ ಶ್ರೀಭದ್ರಕಾಳಿ ಕೊರಗಜ್ಜ ಸಾನ್ನಿಧ್ಯದ ಅಶೋಕ್ ಪಂಡಿತ್, ಕೇಂದ್ರದ ಭಾಗವತಿಕೆ ಗುರು ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.


11.30ರಿಂದ ಪೂರ್ವರಂಗ, ಮಧ್ಯಾಹ್ನ 1.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯುವುದು. 12ರಂದು ಬೆಳಗ್ಗೆ 9.30ಕ್ಕೆ ಶ್ರೀ ಶಾರದಾಪೂಜೆ, ಅಕ್ಷರಾಭ್ಯಾಸ, 11.30ಕ್ಕೆ ತಾಳಮದ್ದಳೆ, ಪೂರ್ವರಂಗ, ಮಧ್ಯಾಹ್ನ 1.30ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಗೌರವಾಧ್ಯಕ್ಷೆನ್.ಎಕೆ ರಾಮಚಂದ್ರ ಭಟ್ ಪನೆಯಾಲ, ಖ್ಯಾತ ಪುಂಡುವೇಷಧಾರಿ ಶಿವಾನಂದ ಶೆಟ್ಟಿ ಬಜಕೂಡ್ಲು ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries