HEALTH TIPS

ಕೋಟೆ ಚಾವಡಿ ಶ್ರೀ ದೂಮಾವತಿ ದೈವ ಕೋಲ-ಆಮಂತ್ರಣಪತ್ರಿಕೆ ಬಿಡುಗಡೆ

ಕಾಸರಗೋಡು : ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೆ ಚಾವಡಿ ಶ್ರೀ ದೂಮಾವತಿ ದೈವ ಕೋಲ ಅ. 31ರಂದು ನಡೆಯಲಿರುವುದು. ದೀಪಾವಳಿ ನೇಮೋತ್ಸವ ಎಂದೇ ಪ್ರಖ್ಯಾತಿ ಪಡೆದಿರುವ ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ ಬಿಡುಗಡೆಗೊಳಿಸಲಾಯಿತು. ಕಾಸರಗೋಡು ಕೋಟೆ ಶ್ರೀ ದೂಮಾವತಿ ಉತ್ಸವ ಸಮಿತಿ ವತಿಯಿಂದ ಕರ್ಯಖ್ರಮ ಹಮ್ಮಿಕೊಳ್ಳಲಾಗಿತ್ತು.

ಉತ್ಸವ ಸಮಿತಿ ಅಧ್ಯಕ್ಷ ಪಾಂಗೋಡು ನವೀನ್ ನಾಯ್ಕ್ ನಾಗರಕಟ್ಟೆ ಅವರು ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ಹಾಗೂ ಉತ್ಸವ ಸಮಿತಿ ಕೋಶಾಧಿಕಾರಿ ವಾಮನ್ ರಾವ್ ಬೇಕಲ ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ನಾಗೇಶ್ ನಾಯಕ್ ಮಂಗಳೂರು, ಉದ್ಯಮಿ ನಿರಂಜನ್ ಕೊರಕ್ಕೊಡು, ಸಂತೋಷ್ ನಾಯ್ಕ್ ಪುತ್ತೂರು, ಭಾಸ್ಕರ್ ರಾವ್ ಮಂಗಳೂರು, ರಮೇಶ್ ಕುಂಬಳೆ, ಜಯಂತಿ ಕೋಟೆಕಣಿ, ಕಾರ್ತಿಕ್ ಕಾಸರಗೋಡು, ಪ್ರಜ್ವಲ್ ನಾಯ್ಕ್ ನಾಗರಕಟ್ಟೆ, ಶ್ರಿಕಾಂತ್ ನಾಗರಕಟ್ಟೆ, ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries