HEALTH TIPS

ಪೆರ್ಲದಲ್ಲಿ ಒಗ್ಗಟ್ಟಲ್ಲಿ ಕುಳಿತು ಒಂದಿಷ್ಟು ಚರ್ಚಿಸೋಣ ಕಾರ್ಯಕ್ರಮ

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ನೇತೃತ್ವದಲ್ಲಿ 10 ಹಾಗೂ 15ನೇ ವಾರ್ಡಿನ ಸಹಭಾಗಿತ್ವದಲ್ಲಿ ನಡೆದ ಒಗ್ಗಟ್ಟಲ್ಲಿ ಕುಳಿತು ಒಂದಿಷ್ಟು ಚರ್ಚಿಸೋಣ ಧ್ಯೇಯ ವಾಕ್ಯದಡಿಯ ಬಾಲ ಸಭಾ ಬಾಲ ಸದಸ್ಸ್ ಕಾರ್ಯಕ್ರಮವು ಪೆರ್ಲ ಸತ್ಯನಾರಾಯಣ  ಶಾಲೆಯಲ್ಲಿ ನಡೆಯಿತು.

ಗ್ರಾ.ಪಂ.ಉಪಾಧ್ಯಕ್ಷೆ ರಮ್ಲ ಕಾರ್ಯಕ್ರಮ ಉದ್ಘಾಟಿಸಿದರು. ಪಂ.ಸದಸ್ಯೆ ಉಷಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯ ಕೇಶವ ಪ್ರಸಾದ್, ಶಿಕ್ಷಕರಾದ ಕೃಷ್ಣ ರಾಜ್, ರಂಜಿತ್, ಸಿಡಿಎಸ್ ಸದಸ್ಯೆ ಪುಷ್ಪಲತಾ, ಎಡಿಎಸ್ ಕಾರ್ಯದರ್ಶಿ ಪ್ರೇಮಲತಾ, ಸಂಪನ್ಮೂಲ ವ್ಯಕ್ತಿಗಳಾದ ಸುಶ್ಮಿತಾ, ನವ್ಯ, ಪ್ರಮೀಳಾ ಕುಮಾರಿ ಶುಭಾಶಂಸನೆಗೈದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ  ಪ್ರಾರ್ಥನೆಗೈದು ಸ್ವಾಗತಿಸಿದರು. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಮಕ್ಕಳ ಹಕ್ಕುಗಳ ಬಗ್ಗೆ, ಬಾಲಸಭಾ ಶಕ್ತೀಕರಣದ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ 120 ಮಕ್ಕಳು ಪಾಲ್ಗೊಂಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries