ಕಾಸರಗೋಡು: ನಗರದ ಚಕ್ರಬಜಾರ್ ನಿವಾಸಿ, ವ್ಯಾಪಾರಿ ಪ್ರಸಕ್ತ ತಾಳಿಪಡ್ಪುವಿನಲ್ಲಿ ವಾಸಿಸುತ್ತಿರುವ ತಾರಾನಾಥ ಭಕ್ತ(78)ನಿಧನರಾದರು. ಕಾಸರಗೋಡು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿ ಹಾಗೂ ಮೆನೇಜಿಂಗ್ ಟ್ರಸ್ಟೀ ಆಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ನಗರದ ಚಕ್ಕರ್ಬಜಾರ್ನಲ್ಲಿ ಸ್ಟೇಶನರಿ ಮಾರ್ಟ್ ಹಗೂ ಮುದ್ರಣಾಲಯ ನಡೆಸುತ್ತಿದ್ದರು.
ಕಾಸರಗೋಡು ಗೀತಾವಿಹಾರ ಭಜನಾ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು, ಖ್ಯಾತ ನಾಟಕ ಸಂಸ್ಥೆ ಯವನಿಕಾ ಕಾಸರಗೋಡಿನಲ್ಲೂ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ತಬಲಾ ಪಟುವಾಗಿದ್ದ ಇವರು ಹಲವು ಮಂದಿ ಶಿಷ್ಯವೃಂದವನ್ನು ಹೊಂದಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.